Connect with us

    LATEST NEWS

    ಪಣಂಬೂರು – ಸಮುದ್ರಪಾಲಾಗುತ್ತಿದ ಇಬ್ಬರನ್ನು ರಕ್ಷಿಸಿದ ಜೀವರಕ್ಷಕರು

    ಮಂಗಳೂರು ಅಕ್ಟೋಬರ್ 2: ವಿಕೇಂಡ್ ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದ ಬೆಂಗಳೂರಿನ ಇಬ್ಬರು ಯುವಕರನ್ನು ರಕ್ಷಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕರು ಸಮುದ್ರಕ್ಕೆ ಇಳಿದು ಈಜಲು ತೆರಳಿದ್ದಾರೆ. ಆದರೆ ಚಂಡಮಾರುತಗಳಿಂದಾಗಿ ಸಮುದ್ರ ಅಬ್ಬರದಿಂದ ಇದ್ದ ಹಿನ್ನಲೆ ಇಬ್ಬರು ಯುವಕರು ಸಮುದ್ರದ ಅಲೆ ಗೆ ಸಿಲುಕಿದ್ದಾರೆ.


    ಕೂಡಲೇ ಸ್ಥಳದಲ್ಲಿದ್ದ ಜೀವರಕ್ಷಕ ತಂಡದ ಸದಸ್ಯರು ಹರಸಾಹಸ ಪಟ್ಟು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಬ್ಬರು ಯುವಕರನ್ನು ನೀರಿನಿಂದ ಮೇಲೆ ತರಲು 45 ನಿಮಿಷಗಳ ಕಾಲ ಪ್ರಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ

    Share Information
    Advertisement
    Click to comment

    You must be logged in to post a comment Login

    Leave a Reply