UDUPI
ಬಹುಮನಿ ಸುಲ್ತಾನ ಜಯಂತಿ ಪ್ರಸ್ತಾಪ ಪುನರ್ ಪರಿಶೀಲಿಸಿ – ಕೋಟ ಶ್ರೀನಿವಾಸ್ ಪೂಜಾರಿ
ಬಹುಮನಿ ಸುಲ್ತಾನ ಜಯಂತಿ ಪ್ರಸ್ತಾಪ ಪುನರ್ ಪರಿಶೀಲಿಸಿ – ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ ಫೆಬ್ರವರಿ 14 : ರಾಜ್ಯಸರಕಾರ ನಡೆಸಲು ಉದ್ದೇಶಿಸಿರುವ ಬಹುಮನಿ ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಿದ್ದರಾಮಯ್ಯ ಸರ್ಕಾರ ಬರೇ ಇಂತಹ ಕೆಲಸಗಳನ್ನೇ ಮಾಡ್ತಾ ಇದೆ ಎಂದು ಹೇಳಿದರು.
ಮಹಾಪುರುಷರ ದಿನಾಚರಣೆ ಆದ್ರೆ ತಪ್ಪಲ್ಲ, ಆದರೆ ಕ್ರೌರ್ಯದ ಮತ್ತೊಂದು ಸಂಕೇತವಾದ ಟಿಪ್ಪು ಜಯಂತಿ ಮಾಡಿದರು, ಈಗ ಬಹುಮನಿ ಸುಲ್ತಾನರೂ ಕನ್ನಡಿಗರಿಗೆ ಬಹಳ ತೊಂದರೆ ಕೊಟ್ಟಿದಾರೆ ಎಂದು ಮಾದ್ಯಮಗಳಲ್ಲಿ ಓದಿದ್ದೇನೆ ಎಂದು ಹೇಳಿದ ಅವರು ಟಿಪ್ಪುವಿನ ಮತ್ತೊಂದು ರೂಪ ಬಹುಮನಿ ಸುಲ್ತಾನರಾದ್ರೆ, ಈ ಪ್ರಸ್ತಾಪ ದ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
You must be logged in to post a comment Login