Connect with us

LATEST NEWS

ಕರುಳು ಬಳ್ಳಿಯನ್ನು ಕತ್ತರಿಸಿ ಕೋತಿ ಮರಿಯ ರಕ್ಷಣೆ

ಕರುಳು ಬಳ್ಳಿಯನ್ನು ಕತ್ತರಿಸಿ ಕೋತಿ ಮರಿಯ ರಕ್ಷಣೆ

ಉಡುಪಿ ಫೆಬ್ರವರಿ 18: ಉಡುಪಿಯಲ್ಲಿ ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಗರ್ಬಿಣಿ ಕೋತಿಯ ಹೊಟ್ಟೆಯಲ್ಲಿದ್ದ ಮರಿ ಕೋತಿಯನ್ನು ರಕ್ಷಿಸಿದ ಘಟನೆ ನಡೆದಿದೆ.

ಉಡುಪಿ ಸಮೀಪದ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ಅಪರಿಚಿತ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಮಂಗ ಸಾವನ್ನಪ್ಪಿತ್ತು. ಅಪಘಾತದ ರಭಸಕ್ಕೆ ಮೃತಪಟ್ಟಿದ್ದ ತಾಯಿ ಮಂಗನ ಹೊಟ್ಟೆಯಿಂದ ಹೊರಗೆ ಎಸೆಯಲ್ಪಟ್ಟು ಸಾವಿನಂಚಿನಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಮಂಗದ ಮರಿಯ ಕರುಳ ಬಳ್ಳಿಯನ್ನು ಕತ್ತರಿಸಿ ಮರಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಲೆವೂರು ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ಹಾಗೂ ರಂಜಿತ್ ಇವರು ಮರಿ ಮಂಗದ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೃತ ತಾಯಿ ಮಂಗವನ್ನು ಅಲ್ಲೇ ಸಮೀಪ ಮಣ್ಣು ಮಾಡಿದ್ದಾರೆ. ಮರಿ ಮಂಗವನ್ನು ರಂಜಿತ್ ತಮ್ಮ ಮನೆಗೆ ಕೊಂಡೊಯ್ದು ಆರೈಕೆ ಮಾಡಿದ್ದು. ನಂತರ ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *