Connect with us

    BELTHANGADI

    ನೆರೆ ಸಂತ್ರಸ್ಥರಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ಆಟೋ ಚಾಲಕ

    ನೆರೆ ಸಂತ್ರಸ್ಥರಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ಆಟೋ ಚಾಲಕ

    ಬೆಳ್ತಂಗಡಿ ಅಗಸ್ಟ್ 12: ನೆರೆ ಸಂತ್ರಸ್ಥರಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಅಟೋ ಚಾಲಕರೋಬ್ಬರು ಮಾನವೀಯತೆ ಮೆರೆದಿದ್ದಾರೆ.

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹೊನಪ್ಪ ಗೌಡ ಅವರು ನೆರೆ ಸಂತ್ರಸ್ಥರಿಗೆ ತಮ್ಮ ಗಳಿಕೆಯ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜನರಲ್ಲಿ ನೆರ ಸಂತ್ರಸ್ಥರಿಗೆ ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಶಾಸಕರ ಈ ಮನವಿಗೆ ಸ್ಪಂದಿಸಿದ ಆಟೋ ಚಾಲಕ ಹೊನಪ್ಪ ಗೌಡ ಅವರು 1 ಲಕ್ಷ ರೂಪಾಯಿ ಸಹಾಯವನ್ನು ಶಾಸಕರ ಕಚೇರಿಯಲ್ಲಿ ನೀಡಿದ್ದಾರೆ.
    ನೆರೆ ಸಂತ್ರಸ್ತರನ್ನು ಕಂಡು ಮಿಡಿದ ಆಟೋ ಚಾಲಕ ಹೊನಪ್ಪ ಗೌಡ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply