Connect with us

KARNATAKA

ಉತ್ತರ ಕನ್ನಡ: ಯುವತಿಯ ಕಳ್ಳ ಸಾಗಣೆಗೆ ವಿಫಲ ಯತ್ನ..!

ಸಿದ್ದಾಪುರ: ಯುವತಿಯೋರ್ವಳನ್ನು ವೇಶ್ಯೆವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರಚೋದಿಸಿ ಕಳ್ಳ ಸಾಗಣೆಗೆ ಯತ್ನಿಸುತ್ತಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಮೂವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕಾಶ ಕೊಂಡ್ಲಿ, ಮಹೇಶ ನಾರಾಯಣ ಮಡಿವಾಳ ಕೊಂಡ್ಲಿ, ಪಾರ್ವತಮ್ಮ ಬೆಂಗಳೂರು ಎನ್ನುವವರ ಮೇಲೆ ಸಿದ್ದಾಪುರ ಪೊಲೀಸರುಬ ಪ್ರಕರಣ ದಾಖಲು ಮಾಡಿದ್ದಾರೆ. ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಯುವತಿಗೆ ಆರೋಪಿತರು ನೀನು ತುಂಬಾ ಚೆನ್ನಾಗಿದ್ದೀಯ, ನೀನು ಒಪ್ಪಿದರೆ ಒಳ್ಳೆ ಗಿರಾಕಿ ಕೊಡಿಸುತ್ತೇವೆ, ಹೇರಳ ಹಣ ಸಂಪಾದಿಸಬಹುದು ಎಂದು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪಟ್ಟಣದ ಐಬಿ ಬಳಿ ಕರೆಯಿಸಿ ಒತ್ತಾಯಿಸಿದ್ದಾರೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಪಾರ್ವತಮ್ಮ ಯುವತಿಯ ಮೇಲೆ ಹಲ್ಲೆ ಮಾಡಿ ಹೆದರಿಸಿ ಯುವತಿಯ ಕಳ್ಳ ಸಾಗಣೆ ಮಾಡಲು ಪ್ರಯತ್ನಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಾಸಿ ತನಿಖೆ ಮುಂದುವರಿಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply