Connect with us

    LATEST NEWS

    ಪೋಲೀಸ್ ಪೇದೆಯ ಕೊಲೆಗೆ ಯತ್ನ : ದನ ಕಳ್ಳ ಅರೆಸ್ಟ್

    ಪೋಲೀಸ್ ಪೇದೆಯ ಕೊಲೆಗೆ ಯತ್ನ : ದನ ಕಳ್ಳ ಅರೆಸ್ಟ್

    ಉಡುಪಿ. ಅಕ್ಟೋಬರ್ 21 : ಅಕ್ರಮ ಜಾನುವಾರು ಸಾಗಾಟವನ್ನು ತಡೆಯಲು ಯತ್ನಿಸಿದ ಪೋಲಿಸ್ ಸಿಬಂದಿಯ ಕೊಲೆ ಯತ್ನ ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೋಲೀಸರು ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಲ್ಲೆಗೊಳಗಾದ ಪೋಲಿಸ್ ಸಿಬಂದಿ

    ಉಡುಪಿ ಜಿಲ್ಲೆಯ ಕುಂದಾಪುರದ ಕಂಡ್ಲೂರಿನಲ್ಲಿ ಅಕ್ಟೋಬರ್ 17 ರಂದು ನಡೆದಿದ್ದ ಈ ಘಟನೆಯಲ್ಲಿ ಪೋಲೀಸರು ಮಹೀಂದ್ರ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಹಾಗೂ ಅಮಾನುಷವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

    ವಾಹನವನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರೂ, ದನ ಕಳ್ಳರು ಪೋಲೀಸ್ ಕಾನ್ ಸ್ಟೇಬಲ್ ಪ್ರಶಾಂತ್ ನಾಗಣ್ಣ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದರು.

    ಸಣ್ಣ ಪುಟ್ಟ ಗಾಯಗಳೊಂದಿಗೆ ಬಜಾವಾಗಿದ್ದ ಪ್ರಶಾಂತ್ ಅವರಿಗೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು.

    ಆರೋಪಿ ಮೊಯಿದಿನ್ ಬ್ಯಾರಿ

    ಈ ಸಂಬಂಧ ಆರೋಪಿಗಳ ಪತ್ತೆಗಾಗಿ ತನಿಖೆ ನಡಿಸಿದ ಪೋಲೀಸರು ಉಡುಪಿಯ ಗುಲ್ವಾಡಿ ನಿವಾಸಿ ಮೊಯಿದೀನ್ ಬ್ಯಾರಿ ಅಲಿಯಾಸ್ ಮೋನು (42) ಎಂಬಾತನನ್ನು ಬಂಧಿಸಿದ್ದಾರೆ.

    ಆರೋಪಿಯ ಜೊತೆಗೆ ಹೊರ ಜಿಲ್ಲೆಗಳಿಗೆ ಸೇರಿದ ಮೂವರು ಆರೋಪಿಗಳೂ ಆ ಸಂದರ್ಭದಲ್ಲಿ ವಾಹನದಲ್ಲಿದ್ದರು.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸಂಜೀವ್ ಪಾಟೀಲ್ ಆರೋಪಿಯನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ಬಳಿಕ ಹೆಚ್ಚಿನ ತನಿಖೆಯನ್ನು ನಡೆಸಲಿದ್ದೇವೆ ಎಂದಿದ್ದಾರೆ.

    ಆರೋಪಿ ಮೊಯಿದೀನ್ ಬ್ಯಾರಿ ಗೆ ಉಡುಪಿ ನ್ಯಾಯಾಲಯ ನ್ಯಾಯಾಂಗ ಬಂಧನದ ಆದೇಶ ನೀಡಿದೆ. ಆರೋಪಿಗಳು ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ 10 ಜಾನುವಾರುಗಳು ಸಾವನ್ನಪ್ಪಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply