JYOTHISHYA
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

ಮೇಷ:

ಸಂಗಾತಿಯ ನಡುವಿನ ಮನಸ್ತಾಪದಿಂದ ತಾವು ಬಹಳಷ್ಟು ಮಾನಸಿಕವಾಗಿ ಚೈತನ್ಯ ಕಳೆದುಕೊಳ್ಳಬಹುದು ಆದಷ್ಟು ಈ ದಿನ ಉತ್ಸಾಹ ಲವಲವಿಕೆ ತುಂಬಿಕೊಳ್ಳುವುದು ಒಳಿತು. ಹೂಡಿಕೆಗಳಲ್ಲಿ ಆದಷ್ಟು ಎಲ್ಲವನ್ನೂ ತಿಳಿದುಕೊಂಡು ಮುಂದುವರೆಯುವುದು ಕ್ಷೇಮ. ಸಹೋದರರ ನಡುವೆ ಭಿನ್ನಾಭಿಪ್ರಾಯ ಆಗದಂತೆ ನೋಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಷಭ:
ಕೆಲವು ವಿಚಾರಗಳನ್ನು ಆದಷ್ಟು ಸಾವದಾನದಿಂದ ಯೋಚಿಸಿ ಮುಂದುವರೆಯಬೇಕಾಗಿದೆ. ನಿಮ್ಮ ಹಠ ಹಾಗೂ ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇನ್ನಿಲ್ಲದ ಸಮಸ್ಯೆ ಮಾಡಿಕೊಳ್ಳಬಹುದು ಎಚ್ಚರ. ಮಕ್ಕಳ ಪ್ರಗತಿಯಿಂದ ತಮ್ಮಲ್ಲಿ ಸಂತೋಷ ಈ ದಿನ ಮೂಡಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ:
ಆಕಸ್ಮಿಕವಾಗಿ ಹಣಕಾಸಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಚ್ಚರವಿರಲಿ. ಸುಖಾಸುಮ್ಮನೆ ಸಾಲದ ವ್ಯವಹಾರಗಳನ್ನು ಮಾಡಬೇಡಿ ಇದು ನಿಮಗೆ ಕಷ್ಟ ತರಬಹುದಾಗಿದೆ. ಸಂಜೆ ವೇಳೆಗೆ ಉತ್ತಮ ರೀತಿಯ ವಹಿವಾಟು ನಿರೀಕ್ಷಿಸಬಹುದು. ಮನೆಗೆ ಬಂಧುಮಿತ್ರರ ಆಗಮನ ಸಂತೋಷ ತರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ:
ಸ್ವಂತಿಕೆ ಹಾಗೂ ಪರೋಪಕಾರ ಗುಣಗಳು ನಿಮ್ಮಲ್ಲಿ ಮೂಡಲಿದೆ. ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವ ದಿನವಿದು. ಹಣಕಾಸಿನಲ್ಲಿ ಈ ದಿನ ಉತ್ತಮ ನಿರೀಕ್ಷೆ ಕಂಡುಬರುತ್ತದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಗೆಲುವು ಪಡೆಯಲು ತಜ್ಞರ ಜೊತೆ ಚರ್ಚಿಸುವುದು ಒಳಿತು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:
ಅತ್ಯಂತ ಬಾಲಿಶ ವರ್ತನೆ ತೋರುವ ವ್ಯಕ್ತಿಗಳಿಂದ ದೂರವಿರಿ. ನಿಮ್ಮ ವ್ಯವಸ್ಥಿತ ಜೀವನಶೈಲಿಗೆ ಮಾರಕವಾಗಬಹುದಾದ ಹೂಡಿಕೆಗಳಿಂದ ದೂರವಿರುವುದು ಸೂಕ್ತ. ಜಾಗ ಜಮೀನಿನ ವಿಷಯದಲ್ಲಿ ತಕರಾರುಗಳು ಭುಗಿಲೇಳುವ ಸಾಧ್ಯತೆ ಇದೆ ಎಚ್ಚರ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕನ್ಯಾ :
ಸ್ವಯಂಕೃತ ಅಪರಾಧಗಳಿಂದ ತಾವು ಪಾಠ ಕಲಿಯುವ ದಿನವಿದು. ಕಲಿಕೆಯ ವಿಷಯಾಸಕ್ತಿ ಬಹಳಷ್ಟು ಬೆಳೆಯಲಿದೆ. ಉದ್ಯೋಗದ ನಿರೀಕ್ಷೆಗೆ ಮೂರ್ತಸ್ವರೂಪ ಪಡೆಯುವ ದಿನವಿದು. ಅಪರಿಚಿತರ ಬಗ್ಗೆ ಎಚ್ಚರ ಇರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ತುಲಾ :
ಜಂಜಾಟಗಳಿಲ್ಲದ ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತದೆ. ಈ ದಿನ ಬಹುತೇಕ ನೀವು ಮನರಂಜನೆಗಾಗಿ ಮೀಸಲಿಡುವ ಸಾಧ್ಯತೆಯಿದೆ. ಪತ್ನಿಯ ಸಂಗಡ ಉತ್ತಮ ವಾತಾವರಣ, ಮಕ್ಕಳೊಂದಿಗೆ ಸಂತೋಷ ಕಾಣುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಶ್ಚಿಕ :
ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆಯಲು ಮುಂದಾಗುತ್ತೀರಿ. ಈ ದಿನ ಆರ್ಥಿಕವಾಗಿ ಸ್ವಲ್ಪ ಪ್ರಮಾಣದ ನಷ್ಟಗಳು ಗೋಚರವಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನಲ್ಲಿ ಆದಷ್ಟು ನಿಗಾ ವಹಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:
ನಿಮ್ಮ ಗುರಿ ಸಾಧನೆಗಾಗಿ ಶ್ರಮ ಪಡುವ ಸಾಧ್ಯತೆಯಿದೆ. ಹಲವು ದಿನದ ಕೆಲಸಗಳು ಮೂರ್ತ ಸ್ವರೂಪ ಪಡೆಯಲಿದೆ. ಹಳೆಯ ಹೂಡಿಕೆಗಳು ಲಾಭದಿಂದ ಕೂಡಿರುತ್ತದೆ. ನಿಮ್ಮ ನಿರೀಕ್ಷಿತ ಕೆಲಸಗಳಿಗೆ ಹಲವರಿಂದ ಸಹಾಯ ದೊರೆಯುವ ನಿರೀಕ್ಷೆ ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಕರ:
ಜಮೀನು ವ್ಯಾಜ್ಯಗಳು ಭುಗಿಲೇಳುವ ಸಾಧ್ಯತೆ ಇದೆ. ಆದಷ್ಟು ಈ ದಿನ ತಾಳ್ಮೆ ಬಹು ಮುಖ್ಯವಾದ ಸಾಧನವಾಗಿದೆ. ಪತ್ನಿಯ ಮಾತುಗಳಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು, ಕೇಳುವ ವ್ಯವಧಾನ ಇರಲಿ. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಸಾಧನೆ ಮೂಡಿಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕುಂಭ:
ಬಾಕಿ ಇರುವ ಕೆಲಸಗಳನ್ನು ಇಂದು ಪೂರ್ಣ ಮಾಡುವ ತಯಾರಿ ನಡೆಸುವಿರಿ ಅದರಂತೆ ಯಶಸ್ಸು ಸಹ ಆಗುವಿರಿ. ಹಳೆಯ ಮಿತ್ರರೊಡನೆ ಕಾಲ ಕಳೆಯುವ ಸಮಯ ಸಂದರ್ಭ ಒದಗಿ ಬರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಆದಷ್ಟು ಗಮನವಹಿಸುವುದು. ಭೂ ಸಂಬಂಧಿತ ಸಮಸ್ಯೆಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೀನ:
ಗುರುಗಳ ಕೃಪಾಕಟಾಕ್ಷದಿಂದ ಸಮಸ್ಯೆಗಳು ಪರಿಹಾರವಾಗುವುದು. ದೈವ ದೇಗುಲಗಳ ದರ್ಶನ ಅವಕಾಶಗಳು ಸಿಗಲಿದೆ. ಆರ್ಥಿಕವಾಗಿ ಅಲ್ಪ ಪ್ರಮಾಣದ ಹಿನ್ನಡೆ ಕಾಣಬಹುದು, ಆದಷ್ಟು ಲೇವಾದೇವಿ ವ್ಯವಹಾರದಲ್ಲಿ ಜಾಗೃತೆ ವಹಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262