LATEST NEWS
ಉದ್ಯಮಿ ಮನೆಯಲ್ಲಿ 150 ಕೋಟಿ ಗೂ ಅಧಿಕ ಹಣ ಪತ್ತೆ – ನೋಟು ಎಣಿಸಲು ಹೋದ ಅಧಿಕಾರಿಗಳೇ ಸುಸ್ತು…!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಲಖನೌ: ಉತ್ತರ ಪ್ರದೇಶದ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 150 ಕೋಟಿ ಗೂ ಅಧಿಕ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸುಗಂಧ ದ್ರವ್ಯ ಉದ್ಯಮಿಯೊಬ್ಬರ ಮೇಲೆ ಜಿಎಸ್ ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಉದ್ಯಮಿಯ ಮನೆಯ ಎರಡು ವಾರ್ಡ್ರೋಬ್ಗಳಲ್ಲಿ ಎರಡು ಚಿಕ್ಕ ಗುಡ್ಡಗಳ ರೀತಿ ಹಣವನ್ನು ಜೋಡಿಸಿಡಲಾಗಿದ್ದು, ನೋಟಿನ ಬಂಡಲ್ಗಳನ್ನು ಪ್ಲಾಸ್ಟಿಕ್ ಪೇಪರ್ನಲ್ಲಿ ಸುತ್ತಿ, ಹಳದಿ ಟೇಪ್ ಮೂಲಕ ಕಟ್ಟಿ ಇಡಲಾಗಿತ್ತು. ಅಂತಹ 30ಕ್ಕೂ ಹೆಚ್ಚು ದೊಡ್ಡ ದೊಡ್ಡ ಬಂಡಲ್ಗಳು ಚಿತ್ರದಲ್ಲಿ ಕಂಡುಬಂದಿವೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಹಣ ಎಣಿಸಲು ಅಧಿಕಾರಿಗಳು ಕೊಠಡಿಯ ಚಾಪೆ ಮೇಲೆ ಹಣವನ್ನು ಹರಡಿರುವ ಅಧಿಕಾರಿಗಳು 3 ಹಣ ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡುತ್ತಿದ್ದಾರೆ. ಉದ್ಯಮಿ ಪಿಯೂಷ್ ಜೈನ್ ಅವರು, ಒಡೊಕೆಮ್ ಕೈಗಾರಿಕೆ ಹೊಂದಿದ್ದು, ಈ ಕಂಪನಿಯು ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ಉತ್ಪನ್ನವನ್ನು ಹಲವು ಕಂಪನಿಗಳಿಗೆ ಸರಬರಾಜು ಮಾಡುತ್ತದೆ. ಕಾನ್ಪುರ ಮಾತ್ರವಲ್ಲದೆ, ಉದ್ಯಮಿಗೆ ಸಂಬಂಧಿಸಿದ ಮುಂಬೈ, ಗುಜರಾತ್ನ ಸ್ಥಳಗಳ ಮೇಲೂ ಐಟಿ ದಾಳಿ ನಡೆಸಿದೆ.
You must be logged in to post a comment Login