LATEST NEWS
ಪುತ್ತೂರಿನಲ್ಲಿ ಅರುಣ್ ಪುತ್ತಿಲರ ಬಂಡಾಯ ಪಕ್ಷಕ್ಕೆ ಹಾನಿ ಮಾಡದು -ತೇಜಸ್ವಿ ಸೂರ್ಯ
ಕುಂದಾಪುರ ಎಪ್ರಿಲ್ 21: ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯವಾಗಿರುವುದರಿಂದ ಕಾಂಗ್ರೆಸ್ ಆಗಲಿ, ಪಿಎಫ್ ಐ ಆಗಲಿ ಅಥವಾ ಅರುಣ್ ಪುತ್ತಿಲರಾಗಲಿ ಗೆಲ್ಲುವುದಿಲ್ಲ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬೈಂದೂರಿನಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಅರುಣ್ ಪುತ್ತಿಲರ ಬಂಡಾಯ ಪಕ್ಷಕ್ಕೆ ಹಾನಿ ಮಾಡದು. ಅಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರವರು ಜಯಭೇರಿ ಬಾರಿಸುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಪಿಎಫ್ ಐ ಪಕ್ಷದಿಂದ ಶಫಿ ಬೆಳ್ಳಾರೆ ಜೈಲಿನಲ್ಲಿದ್ದುಕೊಂಢೇ ಸ್ಪರ್ಧೆ ಮಾಡುತ್ತಿದ್ದಾರೆ. ಆದುದರಿಂದ ಇದು ಹಿಂದೂಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ಸಿದ್ಧಾಂತ ಮತ್ತು ಸಂಘಟನೆ ಎರಡೇ ಚುನಾವಣೆಯಲ್ಲಿ ಪಾತ್ರ ವಹಿಸುತ್ತವೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯವಾಗಿರುವುದರಿಂದ ಕಾಂಗ್ರೆಸ್ ಆಗಲಿ, ಪಿಎಫ್ ಐ ಆಗಲಿ ಅಥವಾ ಅರುಣ್ ಪುತ್ತಿಲರಾಗಲು ಗೆಲ್ಲುವುದಿಲ್ಲ ಎಂದರು.
You must be logged in to post a comment Login