Connect with us

    LATEST NEWS

    ಅಮಾಯಕರ ಕೊಲೆಗೆ ಪ್ರಚೋದನೆ ವಿಎಚ್ ಪಿ ಮುಖಂಡ ಜಗದೀಶ್ ಶೇಣವ ಬಂಧಿಸಿ – ಮುನೀರ್ ಕಾಟಿಪಳ್ಳ

    ಅಮಾಯಕರ ಕೊಲೆಗೆ ಪ್ರಚೋದನೆ ವಿಎಚ್ ಪಿ ಮುಖಂಡ ಜಗದೀಶ್ ಶೇಣವ ಬಂಧಿಸಿ – ಮುನೀರ್ ಕಾಟಿಪಳ್ಳ

    ಮಂಗಳೂರು ಜನವರಿ 28: ದೀಪಕ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಕೊಲೆನಡೆಸಿರುವುದನ್ನು ಬಹಿರಂಗವಾಗಿ ಸಮರ್ಥಿಸಿರುವ ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವರ ಹೇಳಿಕೆ ವಿರುದ್ದ ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.

    ಅಮಾಯಕರ ಕೊಲೆಯನ್ನು ಧರ್ಮದ ಆಧಾರದಲ್ಲಿ ಸಮರ್ಥಿಸಿರುವ ಶೇಣವರಿಗೆ ಸರಕಾರ ಒದಗಿಸಿರುವ ಭದ್ರತೆಯನ್ನು ವಾಪಾಸ್ ಪಡೆಯಬೇಕು, ಕೊಲೆ, ಕೋಮುಗಲಭೆಗೆ ಪ್ರಚೋದನೆಯಡಿ ಮೊಕದ್ದಮೆ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ‌.

    ಜಗದೀಶ್ ಶೇಣವರಂತಹ ಮುಖಂಡರು ರಾಜಕೀಯ ಲಾಭಕ್ಕಾಗಿ ಮತ್ತೊಂದು ಧರ್ಮದ ವಿರುದ್ದದ ದ್ವೇಷ ಹುಟ್ಟಿಸುವ ಭಾಷಣಗಳನ್ನು ಪ್ರಚೋದಕವಾಗಿ ಆಡುತ್ತಾರೆ. ಇಂತಹ ಮಾತುಗಳಿಂದ ಪ್ರಚೋದಿತರಾದ ಯುವಕರು ಅಮಾಯಕರ ಕೊಲೆಗಳನ್ನು ನಡೆಸುತ್ತಾರೆ ಎಂದು ಆರೋಪಿಸಿದರು. ಜಿಲ್ಲೆಯ ಶಾಂತಿ ಕದಡುವ ವ್ಯಕ್ತಿಗಳಿಗೆ ಪೊಲೀಸ್ ಭದ್ರತೆ ಒದಗಿಸಿರುವುದು ತಪ್ಪು‌ಸಂದೇಶವನ್ನು ನೀಡುತ್ತದೆ.

    ಶೇಣವರಿಗೆ ಒದಗಿಸಿರುವ ಭದ್ರತೆ ವಾಪಾಸ್ ಪಡೆದು, ಕೋಮುಗಲಭೆಗೆ ಪಿತೂರಿ, ಕೊಲೆಗೆ ಪ್ರಚೋದನೆಯ ಸೆಕ್ಷನ್ ಗಳ ಅಡಿ ಮೊಕದ್ದಮೆ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ಹಾಗೂ ಬಶೀರ್ ಕೊಲೆಯ ಪಿತೂರಿಯಲ್ಲಿ ಶೇಣವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply