Connect with us

    DAKSHINA KANNADA

    ಅನ್ನಭಾಗ್ಯದ ಜೊತೆ ಹುಳು ಭಾಗ್ಯ

    ಅನ್ನಭಾಗ್ಯದ ಜೊತೆ ಹುಳು ಭಾಗ್ಯ

    ಪುತ್ತೂರು,ಸೆಪ್ಟಂಬರ್ 26: ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳು ಭಾಗ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕದಲ್ಲಿ ಗ್ರಾಮಸ್ಥರು ಅಕ್ಕಿ ಪೂರೈಸುವ ಲಾರಿಯನ್ನು ವಾಪಾಸು ಕಳುಹಿಸಿದ ಘಟನೆ ನಡೆದಿದೆ.

    ನೇಲ್ಯಡ್ಕದಲ್ಲಿರುವ ಸಂಚಾರಿ ನ್ಯಾಯಬೆಲೆ ಅಂಗಡಿಗೆ ಇಂದು ಅಕ್ಕಿ ತುಂಬಿಸಿಕೊಂಡು ಬಂದಿದ್ದ ಲಾರಿಯನ್ನು ಗ್ರಾಮಸ್ಥರು ತಡೆದಿದ್ದರು. ಬಳಿಕ ಅಕ್ಕಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಬಂದ ಅಕ್ಕಿಯಲ್ಲಿ ಅಕ್ಕಿಕಾಳಿನಷ್ಟೇ ಹುಳಗಳೂ ಪತ್ತೆಯಾಗಿದೆ.ಈ ಬಗ್ಗೆ ಅಕ್ಕಿ ಪೂರೈಸುವವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಬಳಿಕ ಬಂದ ಲಾರಿಯನ್ನು ಹಿಂದೆ ಕಳುಹಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಈ ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳುಗಳೇ ಹೆಚ್ಚಾಗಿವೆ ಎನ್ನುವ ದೂರು ಕೇಳಿಬರುತ್ತಿತ್ತು.

    ಇಂದು ಮತ್ತೆ ನೇಲ್ಯಡ್ಕಕ್ಕೆ ಬಂದಿದ್ದ ಸಂಚಾರಿ ನ್ಯಾಯಬೆಲೆ ಅಂಗಡಿಯ ವಾಹನದಲ್ಲಿ ಮತ್ತೆ ಹುಳುಗಳಿರುವ ಅಕ್ಕಿಗಳ ಗೋಣಿ ಕಂಡು ಗ್ರಾಮಸ್ಥರು ಕೆರಳಿದ್ದಾರೆ. ತಂದ ಅಕ್ಕಿಯನ್ನು ವಾಪಾಸು ಕೊಂಡೊಯ್ಯುವಂತೆ ತಾಕೀತನ್ನೂ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply