Connect with us

LATEST NEWS

ಮೌನಿ ಅಮವಾಸ್ಯೆಯಂದು ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಆ್ಯಂಕರ್ ಅನುಶ್ರೀ

ಪ್ರಯಾಗ್ ರಾಜ್ ಜನವರಿ 30: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆ್ಯಂಕರ್ ಅನುಶ್ರೀ ತೆರಳಿದ್ದು ಮೌನಿ ಅಮಾವಾಸ್ಯೆ ಶುಭ ದಿನದಂದು ಅನುಶ್ರೀ ತ್ರಿವೇಣಿ ಸಂಗಮ ಪವಿತ್ರ ಸ್ನಾನ ಮಾಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಪೋಸ್ಟ್ ಮಾಡಿರುವ ಅನುಶ್ರೀ ಅವರ ಜೊತೆ ನಟ ಹಾಗೂ ನಿರ್ದೇಶ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹಾಗೂ ರಂಜನ್ ಎಸ್ ಸೇರಿದಂತೆ ಏಳು ಮಂದಿಯ ಟೀಮನ್ನು ನೀವು ಕಾಣ್ಬಹುದು.

ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು. ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ. 29/01/2025 ಮೌನಿ ಅಮಾವಾಸ್ಯ. ಹರ ಹರ ಮಹದೇವ್ ಎಂದು ಅನುಶ್ರೀ ಶೀರ್ಷಿಕೆ ಹಾಕಿದ್ದಾರೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರೆ ಪುಣ್ಯ ಲಭಿಸುತ್ತದೆ. ಆದ್ರೆ ಮಹಾ ಕುಂಭ ಮೇಳದ ಸಮಯದಲ್ಲಿ ಮೌನಿ ಅಮವಾಸ್ಯೆ ದಿನ ತ್ರಿವೇಣಿ ಸಂಗಮ ತಲುಪೋದು ಸುಲಭದ ಮಾತಲ್ಲ. ಅನುಶ್ರೀ ಅದನ್ನೇ ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಕಷ್ಟ ಅಂತ ಮನೆಯಲ್ಲಿ ಕುಳಿತಿದ್ರೆ ಈ ಅವಕಾಶ ಸಿಗ್ತಿರಲಿಲ್ಲ ಎಂದಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *