Connect with us

    LATEST NEWS

    ಪಡುಬಿದ್ರಿ ಸಮುದ್ರ ಕಿನಾರೆಯಲ್ಲಿ ಮಗುಚಿದ ಟಗ್ ಮೇಲೆತ್ತಲು ಮಂಗಳವಾರದ ಪ್ರಯತ್ನವು ವಿಫಲ

    ಉಡುಪಿ, ಮೇ18: ಕೋರಮಂಗಲ್ ಸಪೋರ್ಟ್ ಟಗ್ ನಲ್ಲಿದ್ದ 9 ಜನರು ಬಚಾವಾದರೂ ಪಡುಬಿದ್ರಿ ಯಲ್ಲಿ ಮುಳುಗಿದ ಮೂವರು ಮಂಗಳವಾರ ಬೆಳಗಿನವರೆಗೆ ಪತ್ತೆ ಆಗಿಲ್ಲ.

    ಪಡುಬಿದ್ರಿ ಯ ಕಾಡಿ ಪಟ್ಲ ಬಳಿ ಸಮುದ್ರ ದಡದಲ್ಲಿ ಮಗುಚಿದ ಸ್ಥಿತಿಯಲ್ಲಿ ಪತ್ತೆಯಾದ ಗುಜರಾತ್ ಮೂಲದ ಅಲಯನ್ಸ್ ಟಗ್ ಮೇಲೆತ್ತುವ ಕಾರ್ಯ ಮೂರನೇ ದಿನವೂ ಮುಂದೂಡಲ್ಪಟ್ಟಿದೆ. ಈ ಟಗ್ ಮೇಲೆತ್ತಲು ಎಮ್ ಆರ್ ಪಿ ಎಲ್ ರಂಗ ಪ್ರವೇಶ ಮಾಡಿದೆ.

    ತೌಕ್ತೆ ಚಂಡಮಾರುತಕ್ಕೆ ಸಿಲುಕಿ ನವ ಮಂಗಳೂರು ಬಂದರಿನಿಂದ 4 ನಾಟಿ ಕಲ್ ಮೈಲು ದೂರದಲ್ಲಿ ಟಗ್ ಮುಳುಗಿತ್ತು 8 ಮಂದಿ ಇದ್ದ ಅಲಯನ್ಸ ಟಗ್ ಮುಳುಗಿದ ಸಂದರ್ಭ ಲೈಪ್ ಜಾಕೆಟ್ ಬಳಸಿ ಸಾಹಸಿಕವಾಗಿ ಈಜಿ ಬಚಾವಾಗಿದ್ದರು.
    ಮತ್ತೆ ಇಬ್ಬರ ಮೃತ ದೇಹ ಶನಿವಾರ ಮತ್ತು ಭಾನುವಾರ ಎರ್ಮಾಳಿನಲ್ಲಿ ಪತ್ತೆ ಆಗಿತ್ತು.

    ಒಂದೋ ಮಗುಚಿದ ಟಗ್ಸ್ ನ ಕ್ಯಾಟಿನ್ ಒಳಗಡೆ ಮೃತ ದೇಹ ಇರಬಹುದು. ಅಥವಾ ಕಡಲ್ಬರಕ್ಕೆ ಸಿಲುಕಿ ಮೃತ ಪಟ್ಟ ದೇಹ ದೂರ ಸಾಗಿರಬಹುದು ಎನ್ನಲಾಗಿದೆ. ಚೀಪ್ ಆಫಿಸರ್ ಅಶ್ಪಾಕ್ ಆಲಿ, ಸೀಮೆನ್ ಡ್ರೈವಿಂಗ್ ಕ್ರೂ ಮೊಯ್ನದ್ದೀನ್ ಹಕ್ ಮತ್ತು ಚಾಲಕ ಪವನ್ ಚಂದ್ ಕಟೋಜ್ ನಾಪತ್ತೆಯಾಗಿದ್ದಾರೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply