Connect with us

    DAKSHINA KANNADA

    ಕೇಂದ್ರ ಸರಕಾರದ ಅನುದಾನ ಮುಖ್ಯಮಂತ್ರಿಗಳ ಸಂಪುಟ ಸಹದ್ಯೋಗಿಗಳ ಕಿಸೆ ಸೇರಿದೆ – ಅಮಿತ್ ಶಾ

    ಕೇಂದ್ರ ಸರಕಾರದ ಅನುದಾನ ಮುಖ್ಯಮಂತ್ರಿಗಳ ಸಂಪುಟ ಸಹದ್ಯೋಗಿಗಳ ಕಿಸೆ ಸೇರಿದೆ – ಅಮಿತ್ ಶಾ

    ಮಂಗಳೂರು ಫೆಬ್ರವರಿ 20: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಪ್ರಸಿದ್ದ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರದಿಂದ ಆರಂಭಿಸಿದ್ದೆನೆ, ಖಂಡಿತವಾಗಲೂ ಈ ಬಾರಿ ಜಯ ನಮ್ಮದೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಕುಲ್ಕುಂದಾ ದಲ್ಲಿ ಆಯೋಜಿಸಲಾಗಿರುವ ನವಶಕ್ತಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಬೂತ್ ಮಟ್ಟದಲ್ಲಿ ಪಕ್ಷ ಗೆಲ್ಲಬೇಕು. ಈ ಹಿನ್ನೆಲೆಯಲ್ಲಿ ಪಕ್ಷ  ಬಲ ಪಡಿಸಬೇಕಾಗಿದೆ ಎಂದು ಹೇಳಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೋದಿಗೆ ಪ್ರಶ್ನೆ ಮಾಡ್ತಾರೆ. ಮೋದಿ ಅವರು ಏನು ಸಾಧನೆ ಮಾಡಿದ್ದಾರೆ ಅಂತಾ ಪ್ರಶ್ನೆ ಮಾಡ್ತರೆ. ಆದರೆ ನಾನು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡ್ತೇನೆ.

    5 ವರ್ಷದಲ್ಲಿ ನಿವೇನು ಸಾಧನೆ ಮಾಡಿದ್ದಿರಿ?

    ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ನಿಮ್ಮ ದುರಾಡಳಿ ದ ವಿರುದ್ದ ಜನ ಈ ಭಾರಿ ಹೋರಾಡ್ತಾರೆ. ರಾಜ್ಯದಲ್ಲಿ ಕಮಲವನ್ನು ಅರಳಿಸುತ್ತಾರೆ ಎಂದು ಹೇಳಿದರು.
    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ 18ಸಾವಿರ ಕೋಟಿ ಅನುದಾನ ನೀಡಿದೆ, ಕೇಂದ್ರ ಸರಕಾರ ನೀಡಿದ ಅನುದಾನವನ್ನು ಏನು ಮಾಡಿದ್ರಿ ಸಿದ್ದರಾಮಯ್ಯ ರೇ? ದೀನ ದಲಿತರಿಗೆ ಕೊಟ್ಟಿದ್ದೀರಾ? ಬಡವರಿಗೆ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು .
    ಯಾರಿಗೆ ಅನುದಾನದ ಹಣವನ್ನು ನೀಡಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇಂದ್ರ ದಿಂದ ಬಂದ ಅನುದಾನದ ಹಣ ನಿಮ್ಮ ಸಂಪುಟದ ಸಹೋದ್ಯೋಗಿಗಳ ಕಿಸೆ ಸೇರಿದೆ ಎಂದು ಶಾ ಆರೋಪಿಸಿದರು .

    Share Information
    Advertisement
    Click to comment

    You must be logged in to post a comment Login

    Leave a Reply