Connect with us

    LATEST NEWS

    7 ತಿಂಗಳ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗೆ ಮರಣದಂಡನೆ ಶಿಕ್ಷೆ

    7 ತಿಂಗಳ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗೆ ಮರಣದಂಡನೆ ಶಿಕ್ಷೆ

    ಉಡುಪಿ ಫೆಬ್ರವರಿ 20: ಕುಂದಾಪುರ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅವರು ಈ ಶಿಕ್ಷೆ ನೀಡಿದ್ದಾರೆ. ಮರಣದಂಡನೆ ಶಿಕ್ಷೆ ನೀಡಿದ ಬಳಿಕ ಶಿಕ್ಷೆ ಬರೆಯಲು ಬಳಸಿದ ಪೆನ್ನನ್ನು ನ್ಯಾಯಾಧಿಶರು ಹೊರಗೆ ಬಿಸಾಡಿದರು.

    ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು ಈ ಪ್ರಕರಣದಲ್ಲಿ ಏಳು ತಿಂಗಳ ಗರ್ಭಿಣಿ ಮೆಲೆ ಅತ್ಯಾಚಾರವಾಗಿ ಕೊಲೆಯಾಗಿದೆ, ಅಲ್ಲದೇ ಸಂತ್ರಸ್ಥೆಯ ಹೊಟ್ಟೆಯಲ್ಲಿದ್ದ ಭ್ರೂಣದ ಹತ್ಯೆ ಕೂಡಾ ಆಗಿದೆ ಎಂದರು. ಈ ಹಿನ್ನಲೆಯಲ್ಲಿ ಆರೋಪಿಗೆ ಮರಣ ದಂಡನೆ ವಿಧಿಸಿದಲ್ಲಿ ಮಾತ್ರ ಮೃತಳ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಶಿಕ್ಷೆ ಪ್ರಕಟಿಸುವ ವೇಳೆ ನ್ಯಾಯಾಧೀಶರು ಹೇಳಿದರು.

    ಈ ಪ್ರಕರಣದಲ್ಲಿ ಸರಕಾರಿ ಪರ ವಿಶೇಷ ಅಭಿಯೋಜಕರಾಗಿ ರವಿ ಕಿರಣ್ ಮುರ್ಡೇಶ್ವರ ಅವರು ವಾದಿಸಿದ್ದರು.

    ಪ್ರಕರಣದ ಹಿನ್ನಲೆ

    2015 ರ ಏಪ್ರಿಲ್ ನಲ್ಲಿ ಕುಂದಾಪುರದ ಗೋಪಾಡಿಯಲ್ಲಿ ಈ ಘಟನೆ ನಡೆದಿತ್ತು, ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿ ಪ್ರಶಾಂತ್ 7 ತಿಂಗಳ ಗರ್ಭೀಣಿ ಇಂದಿರಾ ಅವರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply