LATEST NEWS
ಹಾಡು ಹಗಲೇ ತಲವಾರ್ ಬೀಸಿದ ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ ಬಂಧನ
ಹಾಡು ಹಗಲೇ ತಲವಾರ್ ಬೀಸಿದ ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ ಬಂಧನ
ಬಂಟ್ವಾಳ ಜೂನ್ 21: ರೌಡಿಶೀಟರ್ ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ ಸಹಿತ ಆತನ ಸಹಚರರನ್ನು ಬಂಧಿಸುವಲ್ಲಿ ಮಂಗಳೂರು ವಿಶೇಷ ಪೊಲೀಸರ ತಂಡ ಯಶಸ್ವಿಯಾಗಿದೆ.
ಇತ್ತೀಚೆಗೆ ಬಂಟ್ವಾಳದಲ್ಲಿ ತಲವಾರು ಹಿಡಿದು ರೌಡಿಸಂ ಪ್ರದರ್ಶಿಸಿದ ತುಳು ಚಿತ್ರ ನಟ ಸುರೇಂದ್ರ ಪ್ರಕರಣ ನಡೆದ ನಂತರ ತಲೆ ಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಈಗ ಪೊಲೀಸರು ರೌಡಿ ಶೀಟರ್ ತುಳು ಚಿತ್ರನಟ ಸುರೇಂದ್ರ ನನ್ನು ಕುಂಬ್ಳೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ವಿಶೇಷ ಪೋಲೀಸರ ತಂಡ ಕುಂಬ್ಳೆ ಯಲ್ಲಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದು ಇಂದು ಸಂಜೆ ನ್ಯಾಯಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.
ಬಂಟ್ವಾಳ ದಲ್ಲಿ ಕಳೆದ ವಾರ ತಲವಾರು ಬೀಸಿದಲ್ಲದೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ತಲೆಮರೆಸಿಕೊಂಡು ಪೋಲೀಸರಿಗೆ ತಲೆ ನೋವಾಗಿದ್ದ ಸುರೇಂದ್ರ ಬಂಟ್ವಾಳ ಮತ್ತು ಸ್ನೇಹಿತ ಸತೀಶ್ ನನ್ನು ಬಂಧಿಸಿ ಲಾಗಿದೆ.
You must be logged in to post a comment Login