LATEST NEWS
ಭಾರಿ ಮಳೆಗ ಉರುಳಿದ ಬೃಹತ್ ಮರ – ಉತ್ತರ ಪ್ರದೇಶದ ಕಾರ್ಮಿಕನ ಸಾವು
ಭಾರಿ ಮಳೆಗ ಉರುಳಿದ ಬೃಹತ್ ಮರ – ಉತ್ತರ ಪ್ರದೇಶದ ಕಾರ್ಮಿಕನ ಸಾವು
ಮಂಗಳೂರು ಜೂನ್ 20: ಅಶ್ವಥ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಉನಾವ್ ಜಿಲ್ಲೆಯ ಸಫೀಪುರ, ಪಿಕಿ ಗ್ರಾಮ ನಿವಾಸಿ ರಾಮಸೇವಕ್ ಮೃತ ಕಾರ್ಮಿಕ. ಮತ್ತೋರ್ವ ಕಾರ್ಮಿಕ ದಿಲೀಪ್ ಎಂಬವರಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ಮೆಲ್ಕಾರ್ ಸಮೀಪದ ಖಾಸಗಿ ಜಾಗವೊಂದರಲ್ಲಿ ಸಿಮೆಂಟ್ ಆಕೃತಿ ಕೆಲಸ ಮಾಡುತ್ತಿದ್ದಾಗ, ಬುಧವಾರ ಸಂಜೆ ಬೀಸಿದ ಗಾಳಿ ಮಳೆಗೆ ಪಕ್ಕದಲ್ಲಿದ್ದ ಬೃಹತ್ ಮರ ಬುಡ ಸಮೇತ ಮಗುಚಿ ಕೆಲಸ ಮಾಡುತ್ತಿದ್ದ ಟೆಂಟ್ ಮೇಲೆ ಬಿದ್ದಿದೆ.
ಪರಿಣಾಮ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಾಮಸೇವಕ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಮರ ತೆರವು ಕಾರ್ಯಾಚರಣೆ ನಡೆಸಿದರು.
You must be logged in to post a comment Login