UDUPI
ಎಬಿವಿಪಿಯಿಂದ ನಶಾಮುಕ್ತ ಭಾರತದ ಸಹಿ ಸಂಗ್ರಹ ಅಭಿಯಾನ
ಕುಂದಾಪುರ ಸೆಪ್ಟೆಂಬರ್ 16: ಎಬಿವಿಪಿ ವತಿಯಿಂದ ನಶಾ ಮುಕ್ತ ಭಾರತದ ಸಹಿ ಸಂಗ್ರಹ ಅಭಿಯಾನಕ್ಕೆ ಕುಂದಾಪುರ ದಲ್ಲಿ ಚಾಲನೆ ನೀಡಲಾಯಿತು. ಸಹಿ ಸಂಗ್ರಹ ಅಭಿಯಾನ ಕ್ಕೆ ಕುಂದಾಪುರ ಪಿಎಸೈ ಸದಾಶಿವ ಗವರೋಜಿ ಚಾಲನೆ ನೀಡಿದರು.
ಭಾರತ ದೇಶವನ್ನು ನಶಾ ಮುಕ್ತ ಮಾಡಬೇಕು, ಈ ದೇಶದಲ್ಲಿ ಯುವಕರನ್ನು ತಪ್ಪು ಹಾದಿಗೆ ಕೊಂಡೊಯ್ಯುವ ಒಂದು ಷಡ್ಯಂತ್ರ ನಡೆಯುತ್ತಿದೆ.ಸಮಾಜದಲ್ಲಿ ಪ್ರಸಿದ್ದರಾಗಿರುವ, ಚಲನಚಿತ್ರ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಈ ಹೇಯ ಕೃತದಲ್ಲಿ ತೊಡಗಿರುವುದು ದೇಶಕ್ಕೆ ಒಂದು ಕಪ್ಪು ಚುಕ್ಕಿ. ದೇಶದಲ್ಲಿ ಯಾರೆಲ್ಲಾ ಡ್ರಗ್ಸ್, ಗಾಂಜಾ ದಂಧೆಯಲ್ಲಿ ತೊಡಗಿರುವವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಸದಸ್ಯರು ಆಗ್ರಹಿಸಿದರು.
You must be logged in to post a comment Login