Connect with us

    DAKSHINA KANNADA

    ಉಡುಪಿ ವಿಡಿಯೋ ಪ್ರಕರಣ – ಪುತ್ತೂರಿನಲ್ಲಿ ಎಬಿವಿಪಿ ಪ್ರತಿಭಟನೆ

    ಪುತ್ತೂರು ಅಗಸ್ಟ್ 01: ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಗಳ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರಾ ಇಟ್ಟ ಪ್ರಕರಣ ಖಂಡಿಸಿ ಪುತ್ತೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.


    ಪುತ್ತೂರಿನ ನೆಹರೂ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಎಬಿವಿಪಿ ಮುಖಂಡ ಮುಖ್ಯಮಂತ್ರಿಗಳು ಇಂದು ಉಡುಪಿ ಮತ್ತು ಮಂಗಳೂರು ಸುತ್ತಾಡುತ್ತಿದ್ದಾರೆ, ಆದರೆ ಉಡುಪಿ ಘಟನೆಯನ್ನು ಸಾಮಾಜದ ಮುಂದೆ ತಂದವರ ಮನೆಗೆ ಪೋಲೀಸ್ ಕಳುಹಿಸುತ್ತಾರೆ.

    ಸಂವಿಧಾನ ಉಳಿಸುತ್ತೇವೆ ಎನ್ನುವವರು ಜನರ ಸ್ವಾತಂತ್ರ್ಯದ ಹಕ್ಕನ್ನು ಕಸಿಯುತ್ತಿದ್ದಾರೆ. ಉಡುಪಿಯ ಪ್ರಕರಣ ನಡೆದು ನಾಲ್ಕೈದು ದಿನ ಕಳೆದು ಪೋಲೀಸರು ಎಫ್ಐಆರ್ ದಾಖಲಿಸುತ್ತಾರೆ. ಈ ನಡುವೆ ಸಾಕ್ಷ್ಯವೆನ್ನೆಲ್ಲಾ ನಾಶ ಮಾಡಿಯಾಗಿರುತ್ತೆ. ರಾಜ್ಯ ಸರಕಾರ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಭಟನೆಯಲ್ಲಿ ಸರಕಾರವನ್ನು ಒತ್ತಾಯಿಸಿದ ವಿದ್ಯಾರ್ಥಿಗಳು.

    Share Information
    Advertisement
    Click to comment

    You must be logged in to post a comment Login

    Leave a Reply