Connect with us

    DAKSHINA KANNADA

    ಪುತ್ತೂರಿನಲ್ಲಿ ಸರಣಿ ಅಹಿತಕರ ಘಟನೆ, ಧಾರ್ಮಿಕ, ರಾಜಕೀಯ ಮುಖಂಡರ ತುರ್ತು ಸಭೆ ನಡೆಸಿದ ಎಸ್ಪಿ..!

    ಪುತ್ತೂರು: ದಕ್ಷಿಣ ಕನ್ನಡದ  ಪುತ್ತೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆಯತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ ಪಿ ಯತೀಶ್ ಅವರು ಶುಕ್ರವಾರ ತುರ್ತು ಸಭೆ ನಡೆಸಿದರು.
    ಕಳೆದ ನಾಲ್ಕು ದಿನಗಳಿಂದ ಪುತ್ತೂರಿನಲ್ಲಿ ಸಮಾಜದ  ಸ್ವಾಸ್ಥ್ಯ  ಕೆಡಿಸುವ ಸಲುವಾಗಿ ಕೆಲವೊಂದು ಅಹಿತಕರ ಘಟನೆಗಳು ನಡೆಯುತ್ತಿವೆ.  ಇತ್ತೀಚಿಗಿನ ವಿದ್ಯಾರ್ಥಿಗಳ ಪ್ರಕರಣ, ಆಗಸ್ಟ್ 22ರಂದು ರಾತ್ರಿ ನಡೆದ ಹಲ್ಲೆ ಪ್ರಕರಣ, ಬೆಳಗ್ಗಿನ ಜಾವ ಅಂಗಡಿಗೆ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಮುಂದುವರೆದು ಇವುಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗದಂತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಶುಕ್ರವಾರ ತುರ್ತಾಗಿ ಪುತ್ತೂರು ನಗರ ಠಾಣೆಗೆ ಆಗಮಿಸಿ  ಸ್ಥಳೀಯ ಧಾರ್ಮಿಕ, ರಾಜಕೀಯ, ಸಂಘಟನೆಯ ಮುಖಂಡರುಗಳ  ಸಭೆ ನಡೆಸಿ ಘಟನೆಗಳ ಕುರಿತು ಪರಾಮರ್ಶೆ  ನಡೆಸಿದರು.  ಮುಖಂಡರ ಜೊತೆ ಚರ್ಚಿಸಿ  ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
    Share Information
    Advertisement
    Click to comment

    You must be logged in to post a comment Login

    Leave a Reply