Connect with us

KARNATAKA

ಕಾಸರಗೋಡು: ಸಂಪೂರ್ಣ ಜಲಾವೃತವಾದ ಮಧೂರು ದೇಗುಲ

ಕಾಸರಗೋಡು, ಜುಲೈ 06: ಕಾಸರಗೋಡು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಖ್ಯಾತ ದೇವಾಲಯವಾದ ಮಧೂರು ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.

ದೇಗುಲದ ಸಮೀಪದಲ್ಲಿ ಹರಿಯುವ ಮಧುವಾಹಿನಿ ಹೊಳೆ ಮಳೆಯ ಪರಿಣಾಮದಿಂದಾಗಿ ದೇವಾಲಯದೊಳಗೇ ನೀರು ಹರಿದುಬಂದಿದ್ದು ದೇಗುಲದ ಸಿಬ್ಬಂದಿಗಳು ಇದರಿಂದ ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ದೇಗುಲದ ಧ್ವಜಸ್ಥಂಭ ಕೂಡಾ ನೀರಿನಿಂದ ಆವೃತಗೊಂಡಿದೆ.

ಮಧುವಾಹಿನಿ ಹೊಳೆ ಉಕ್ಕಿಹರಿದುದರ ಪರಿಣಾಮ ಅಸುಪಾಸಿನಲ್ಲಿ ಇರುವ ತೋಟಗಳಿಗೆ ಇದರಿಂದ ಹಲವು ಕಡೆ ಕೃಷಿಗೂ ಹಾನಿಯಾಗಿದೆ.ಒಟ್ಟಿನಲ್ಲಿ ಈ ಮಳೆಯಿಂದ ಭಕ್ತರಿಗೂ ಕೂಡಾ ಪ್ರವೇಶ ಕಷ್ಟವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *