Connect with us

    LATEST NEWS

    ಪವಾಡದ ನಿರೀಕ್ಷೆಗೆ ಕ್ಯಾನ್ಸರ್ ಪೀಡಿತ ಐದು ವರ್ಷದ ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿ ಕೊಂದ ತಂದೆತಾಯಿ

    ಉತ್ತರಾಖಂಡ ಜನವರಿ 25: ಪವಾಡ ನಡೆಯುತ್ತದೆ ಎಂದು 5 ವರ್ಷದ ಕ್ಯಾನ್ಸರ್ ಪೀಡಿತ ಬಾಲಕನನ್ನು ಆತನ ತಂದೆ ತಾಯಿಯೇ ಗಂಗಾ ನದಿಯಲ್ಲಿ ಮುಳುಗಿಸಿ ನೂರಾರು ಜನರ ಎದುರು ಸಾಯಿಸಿದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.


    ದೆಹಲಿ ಮೂಲದ ದಂಪತಿಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ ಮಗುವನ್ನು ಗಂಗಾ ನದಿಯಲ್ಲಿ ಮುಳುಗಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಹಿತಿ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತಮ್ಮ ಮಗನ ರಕ್ತದ ಕ್ಯಾನ್ಸರ್ ಗುಣವಾಗುತ್ತದೆ ಎಂದು ಯಾರೋ ಹೇಳಿದ ಮಾತನ್ನು ಕೇಳಿದ ತಂದೆ ತಾಯಿ ಮಗನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಸುಮಾರು 5 ನಿಮಿಷಕ್ಕೂ ಅಧಿಕ ಸಮಯ ಬಾಲಕನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಈ ವೇಳೆ ಅಲ್ಲೆ ನೆರೆದಿದ್ದ ಸಾರ್ವಜನಿಕರು ಕುಟುಂಬವನ್ನು ನಿಲ್ಲಿಸುವಂತೆ ಕೇಳಿದರು. ಆದರೆ ಕೇಳದ ಅವರು ಬಾಲಕನನ್ನು ಸುಮಾರು 5 ನಿಮಿಷಗಳ ಕಾಲ ಮುಳುಗಿಸಿದ್ದಾರೆ. ಈ ನಡುವೆ ಸಾರ್ವಜನಿಕರು ಬಂದು ಬಲವಂತವಾಗಿ ಬಾಲಕನನ್ನು ಹೊರಗೆ ತಂದರು.


    ಕೂಡಲೇ ಮಗುವನ್ನು ಶೀಘ್ರದಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವನನ್ನು “ಸತ್ತಿದ್ದಾರೆ” ಎಂದು ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕನ ತಾಯಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕ ಮತ್ತು ಆತನ ಕುಟುಂಬವನ್ನು ಹರಿದ್ವಾರಕ್ಕೆ ಕರೆದೊಯ್ದ ಕ್ಯಾಬ್ ಚಾಲಕ ನೀಡಿದ ಮಾಹಿತಿಯಂತೆ, ಮಗುವಿನೊಂದಿಗೆ ಅವನ ಪೋಷಕರು ಮತ್ತು ಇನ್ನೊಬ್ಬ ಮಹಿಳೆ ಸಂಬಂಧಿಕರು ಇದ್ದರು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕುಟುಂಬ ಹರಿದ್ವಾರಕ್ಕೆ ತೆರಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply