LATEST NEWS
4 ಕೆ.ಜಿ ಬಂಗಾರದ ಬಳೆಗಳ ದರೋಡೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
4 ಕೆ.ಜಿ ಬಂಗಾರದ ಬಳೆಗಳ ದರೋಡೆ
ಉಡುಪಿ ಸೆಪ್ಟೆಂಬರ್ 18: ಮಾರಕಾಯುಧಗಳನ್ನು ತೋರಿಸಿ ವ್ಯಕ್ತಿಯೋರ್ವರನ್ನು ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ತಿರುವನಂತಪುರು-ಮುಂಬೈ ಮಧ್ಯೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರಸ್ ರೈಲಿನಲ್ಲಿ ನಡೆದಿದೆ.
ಮುಂಬೈಯ ಆಭರಣ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಸಿಂಗ್ ಎಂಬವರೇ ಆಗಂತುಕರಿಂದ ದರೋಡೆಯಾದ ವ್ಯಕ್ತಿಯಾಗಿದ್ದು, ದರೋಡೆಕೋರರು ಅವರ ಸೂಟ್ ಕೇಸ್ ನಲ್ಲಿದ್ದ 4.11 ಕೆ.ಜಿ ಬಂಗಾರದ ಬಳೆಗಳನ್ನು ದರೋಡೆಗೈದಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮುಂಬೈಯಿಂದ ಹೊರಟ ರೈಲು ಇಂದು ಮುಂಜಾನೆ ಕಾಪು ಸಮೀಪಿಸಿದಾಗ ರಾಜೇಂದ್ರ ಸಿಂಗ್ ಇದ್ದ S-7 ಬೋಗಿಗೆ ನುಗ್ಗಿದ ದರೋಡೆಕೋರರು ಚಾಕು ಹಾಗೂ ಪಿಸ್ತೂಲು ತೋರಿಸಿ ಅವರನ್ನು ಕೊಲ್ಲುವ ಬೆದರಿಕೆಯೊಡ್ಡಿತ್ತು. ಬಳಿಕ ರಾಜೇಂದ್ರ ಸಿಂಗ್ ಅವರ ಬಳಿಯಿದ್ದ ಸೂಟ್ ಕೇಸನ್ನು ಕಸಿದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದೆ.
ಈ ಸಂಬಂಧ ದರೋಡೆಗೊಳಗಾದ ರಾಜೇಂದ್ರ ಸಿಂಗ್ ಪಡುಬಿದ್ರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಕಳ ಎಎಸ್ಪಿ ಹೃಷಿಕೇಶ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ದರೋಡೆಕೋರರಿಗಾಗಿ ಬಲೆ ಬೀಸಲಾಗಿದೆ.
You must be logged in to post a comment Login