LATEST NEWS
ಮ್ಯಾನ್ ಹೋಲ್ ಸ್ವಚ್ಚತೆಗೆ ಇಳಿದ ಇಬ್ಬರು ಕಾರ್ಮಿಕರ ಸಾವು
ಮ್ಯಾನ್ ಹೋಲ್ ಸ್ವಚ್ಚತೆಗೆ ಇಳಿದ ಇಬ್ಬರು ಕಾರ್ಮಿಕರ ಸಾವು
ಶಿವಮೊಗ್ಗ ಅಗಸ್ಟ್ 7: ಮ್ಯಾನ್ಹೋಲ್ ಸ್ವಚ್ಚತೆಗೆ ಇಳಿದಿದ್ದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಬಿಳಿಚೋಡು ಹೋಬಳಿಯ ಬೆಂಜಿಕಟ್ಟೆ ಗ್ರಾಮದ ಅಂಜನಿ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ.
ಮ್ಯಾನ್ಹೋಲ್ ಸ್ವಚ್ಚತೆಗೆ ಕಾರ್ಮಿಕರನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಇದನ್ನು ಪಾಲಿಸದಿರುವುದೇ ದುರಂತಕ್ಕೆ ಕಾರಣವಾಗಿದೆ.
ದುರಂತ ಸಂಭವಿಸಿದ ಮ್ಯಾನ್ಹೋಲ್ 20 ಅಡಿಗೂ ಹೆಚ್ಚು ಆಳವಿದೆ. ಮೊದಲಿಗೆ ಅಂಜನಿ ಕಸ ಕಟ್ಟಿದೆಯೇ ಎಂಬುದನ್ನು ನೋಡಲು ಮ್ಯಾನಹೋಲ್ನಲ್ಲಿ ಇಳಿದಿದ್ದು ಉಸಿರುಗಟ್ಟಿ ಕೆಳಗೆ ಜಾರಿದ್ದಾನೆ. ಇದನ್ನು ಗಮನಿಸುತ್ತಿದ್ದ ವೆಂಕಟೇಶ್ ಕೂಡ ಅಂಜನಿಯನ್ನು ರಕ್ಷಿಸಲು ಕೆಳಗೆ ಇಳಿದಿದ್ದಾನೆ. ಇಬ್ಬರೂ ಉಸಿರುಗಟ್ಟಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಶಿವಮೊಗ್ಗ ನಗರದ ಬೈಪಾಸ್ ಮತ್ತು ತೀರ್ಥಹಳ್ಳಿ ರಸ್ತೆಗೆ ಸೇರುವ ಜಾಗದ ಮ್ಯಾನ್ಹೋಲ್ಗಳ ಬಳಿ ಹಲವು ಕಾರ್ಮಿಕರು ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದರು. ಮ್ಯಾನ್ಹೋಲ್ ಒಳಗೆ ಕೆಲಸ ಮಾಡುವಾಗಲೇ ಇವರಿಬ್ಬರೂ ಮೃತಪಟ್ಟಿದ್ದಾರೆ. ಇದು ಯಾರ ಗಮನಕ್ಕೂ ಬಂದಿಲ್ಲ. ಆದರೆ ಎಷ್ಟು ಹೊತ್ತಾದರೂ ಅಂಜನಿ ಮತ್ತು ವೆಂಕಟೇಶ ಬರದಿದ್ದನ್ನು ಗಮನಿಸಿದ ಉಳಿದ ಕಾರ್ಮಿಕರು ಸ್ಥಳಕ್ಕೆ ಹೋಗಿ ನೋಡಿದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಮೇಲೆತ್ತಿದರು.
You must be logged in to post a comment Login