DAKSHINA KANNADA
ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017
ಮಂಗಳೂರು ಅಗಸ್ಟ್ 5: ನಮ್ಮ ಹಿರಿಯರು ನಮಗೆ ನೀಡಿದ ಧಾರ್ಮಿಕ ಸಂಸ್ಕಾರದ ಪರಿಣಾಮ ಯಕ್ಷಗಾನದಂತಹ ಸುವಿಚಾರಗಳು ಬೆಳೆಯುತ್ತಿವೆ. ಆದರೆ ನಾವು ಮಕ್ಕಳಿಗೆ ಈ ತಿಳುವಳಿಕೆ ನೀಡದೇ ಹೋದರೆ ಅವರು ಉತ್ತಮ ವಿಚಾರಗಳಿಂದ ವಂಚಿತರಾಗಿ ಮೌಡ್ಯಗಳಿಗೆ ಬಲಿಯಾಗುವ ಹಾಗೂ ಸಾಂಸ್ಕತಿಕ ಸಂಸ್ಕಾರಗಳಿಂದ ವಿಚಲಿತರಾಗುವ ಭೀತಿ ಇದ್ದು ಆದಷ್ಟು ಈ ಕಾರ್ಯಕ್ರಮಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕು ಎಂದರು.
ಅವರು ಮಂಗಳವಾರ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷದ ಸಂಯುಕ್ತ ಆಶ್ರಯದಲ್ಲಿ ಸಹಯೋಗದೊಂದಿಗೆ ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017 ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಲೆ ಸಪ್ತಾಹದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾವಿದರ ನೆಲೆಯಲ್ಲಿ ಉಮೇಶ್ ಶೆಟ್ಟಿ ಮಚ್ಚಾರು ಅವರನ್ನು ಯಕ್ಷಗಾನಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಅತಿಥಿಗಳಾಗಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ , ಕೊಡೆತ್ತೂರು ದೇವಸ್ಯ ಮಠದ ಸುಧಾ ವೇದವ್ಯಾಸ ಉಡುಪ, ಮೂಡಬಿದಿಯ ಉದ್ಯಮಿ ಶ್ರೀಪತಿ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ,ಉಮೇಶ್ ನೀಲಾವರ್, ಶ್ರೀವತ್ಸ , ಅಶೋಕ ಆಚಾರ್ಯ,ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ವಿನಯ ಆಚಾರ್, ವಸಂತ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
Facebook Comments
You may like
ಯಕ್ಷರಂಗದ ಸಿಡಿಲಮರಿ ಡಾ. ಶ್ರೀಧರ್ ಭಂಡಾರಿ ಇನ್ನಿಲ್ಲ
ಮುಲ್ಕಿ ಕೊಳ್ನಾಡ್ ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅಕಸ್ಮಿಕ..!
ರಂಗಸ್ಥಳದಲ್ಲೇ ಕೊನೆಯುಸಿರೆಳೆದ ಯಕ್ಷಗಾನ ಕಲಾವಿದ
ರಾತ್ರಿ ಕರ್ಪ್ಯೂ – ಇಂದಿನಿಂದ ಕಾಲಮಿತಿಯಲ್ಲಿ ಯಕ್ಷಗಾನ
ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಇನ್ನಿಲ್ಲ
ಫೆವಿಕಾಲ್ ಯಕ್ಷಗಾನ ಜಾಹಿರಾತು ವಿರುದ್ದ ಆಕ್ರೋಶ – ಜಾಹಿರಾತು ಹಿಂಪಡೆದು ಕರಾವಳಿಗರ ಬಹಿರಂಗ ಕ್ಷಮೆಗೆ ಶಾಸಕ ಕಾಮತ್ ಆಗ್ರಹ
You must be logged in to post a comment Login