Connect with us

    LATEST NEWS

    ಪ್ರಧಾನಿ ಮೋದಿ ಕೆಣಕಿದ ನಟಿ ರಮ್ಯಾ: ಮಾಜಿ ಸಂಸದೆ ವಿರುದ್ಧ ಟ್ವೀಟ್ ವಾರ್

    ಬೆಂಗಳೂರು:  ಕಾಂಗ್ರೆಸ್ ನಾಯಕಿ ಹಾಗೂ ನಟಿ ರಮ್ಯಾ ಅವರು ಟ್ವೀಟರ್ ನಲ್ಲಿ ಹೊಸ ಆಫರ್ ನೀಡಿದ್ದಾರೆ. ಆದರೆ ಆ ಆಫರ್ ಗೂ ಮುನ್ನ ನೀವು ಅವರು ನೀಡಿರುವ ಸವಾಲಿಗೆ ಉತ್ತರ ಕೊಡಬೇಕು.

    25 ಸಾವಿರ ರೂಪಾಯಿ ನಗದು ಬಹುಮಾನ

    ದೇಶದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಆಡಳಿತಾರೂಢ ನಾಯಕರು ಯಾರು ಸಂತ್ರಸ್ತರ ನೆರವಿಗೆ ಬರುತ್ತಿಲ್ಲ. ಅದರಲ್ಲೂ ಪ್ರಧಾನಿ ಮೋದಿಯವರು ಜಲಪ್ರಳಯ ಪ್ರದೇಶಗಳಲ್ಲಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಕಸ್ಮಾತ್ ನಿಮಗೆ ಯಾರಿಗಾದರು ಪ್ರಧಾನಿ ಮೋದಿ ಸಂತ್ರಸ್ತರ ಜೊತೆ ಇರುವ ಫೋಟೋ ದೊರೆತರೆ ದಯವಿಟ್ಟು ಇಲ್ಲಿ ನನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ, ಆದರೆ ಅದು ಫೋಟೋ ಶಾಪ್ ಆಗಿರಬಾರದು ಎಂದು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

    ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು (ಫೋಟೋಶಾಪ್ ಅಲ್ಲ) ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದನ್ನು ನೀಡುವುದಾಗಿ ಹೇಳಿದ್ದಾರೆ.
    ರಮ್ಯಾ ಅವರ ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು ಟ್ವೀಟ್ ವಾರ್ ಆರಂಭವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply