Connect with us

DAKSHINA KANNADA

ಗೃಹ ಸಚಿವರ ಜತೆ ಕಲ್ಲಡ್ಕ ಭಟ್, ಮುತ್ತಪ್ಪ ರೈ

ಗೃಹ ಸಚಿವರ ಜತೆ ಕಲ್ಲಡ್ಕ ಭಟ್, ಮುತ್ತಪ್ಪ ರೈ

ಮಂಗಳೂರು,ಸೆಪ್ಟೆಂಬರ್ 21: ರಾಜ್ಯ ಗೃಹ ಖಾತೆ ಸಚಿವ ರಾಮಲಿಂಗಾ ರೆಡ್ಡಿ, ಅರ್ ಎಸ್ ಎಸ್ ಮುಖಂಡ  ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಡಾನ್ ಮುತ್ತಪ್ಪ ರೈ ಮೂರು ಮಂದಿ ಒಂದೇ ವಿಮಾನದಲ್ಲಿ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣಿಸಿದ ವಿದ್ಯಮಾನ ಬುಧವಾರ ನಡೆದಿದೆ. 
ಮಂಗಳೂರು, ಹಾಗೂ ಮೂಡಬಿದರೆಯಲ್ಲಿ ಪೊಲೀಸ್ ಠಾಣೆ,ಅಗ್ನಿಸಾಮಕ ದಳ ಘಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಗೃಹಸಚಿವ ರಾಮಲಿಂಗಾರೆಡ್ಡಿ ಸಂಜೆ  ಮರಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸಂದರ್ಭ ಇಂಡಿಗೋ ವಿಮಾನದಲ್ಲಿ ಎಡಿಜಿಪಿ ಅಲೋಕ್ ಮೋಹನ್ ಜತೆ ಆಸೀನರಾಗಿದ್ದರು.

ಗೃಹ ಸಚಿವರ ಜತೆ ಕಲ್ಲಡ್ಕ ಭಟ್, ಮುತ್ತಪ್ಪ ರೈ;

ಇದೇ ಸಮಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಮುತ್ತಪ್ಪ ರೈ ಅವರುಗಳು  ಪ್ರತ್ಯೇಕವಾಗಿ ವಿಮಾನ ಹತ್ತಿದ್ದರು. ಗೃಹ ಸಚಿವರ ಸಹಿತ ಕಾಂಗ್ರೆಸ್ ಪಕ್ಷಕ್ಕೇ ಸದಾ ತಲೆ ನೋವಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರು ಮತ್ತು ಮಾಜಿ ಡಾನ್ ಮುತ್ತಪ್ಪ ರೈ ಒಟ್ಟಾಗಿ  ಒಂದೇ ವಿಮಾನಲ್ಲಿ ಪ್ರಯಾಣಿಸಿರುವುದು ಕಾಕತಾಳೀಯವೋ, ಕಾಲದ ಮಹಿಮೆಯೋ ಎನ್ನುವ ಕುತೂಹಲ ವಿಮಾನದ ಸಹಪ್ರಯಾಣಿಕರ ಬಸಹಿತ ಎಲ್ಲರಲ್ಲೂ ಉಳಿದುಕೊಂಡಿದೆ.

Share Information
Advertisement
Click to comment

You must be logged in to post a comment Login

Leave a Reply