SULLIA
ಕುಕ್ಕೆ ದೇವರ ದರ್ಶನ ಪಡೆದ ಒಬಾಮಾ ಒಡನಾಡಿ …
ಸುಳ್ಯ, ಆಗಸ್ಟ್ 08 :ಭಾರತೀಯ ಮೂಲದ ಅಮೆರಿಕದ ಪ್ರಜೆ ಒಬಾಮಾ ಒಡನಾಡಿ ಸೆನೆಟ್ ಪ್ರತಿನಿಧಿಯಾಗಿರುವ ತಮಿಳುನಾಡಿನ ರಾಧಾ ಕೃಷ್ಣಮೂರ್ತಿ ಹಾಗೂ ಅವರ ತಾಯಿ ವಿಜಯ ಕೃಷ್ಣಮೂರ್ತಿ ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗ ಪ್ರತಿಷ್ಠೆ ಹಾಗೂ ಪಂಚಾ ಅಭಿಷೇಕ ಸೇವೆ ಪೂರೈಸಿದರು. ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ್ ನಂಬೀಸನ್ ಅವರು ರಾಧಾಕೃಷ್ಣ ಮೂರ್ತಿ ಅವರನ್ನು ಬರಮಾಡಿಕೊಂಡರು. ನಲವತ್ತು ವರ್ಷಗಳಿಂದ ಅಮೆರಿಕದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಅವರು ಒಬಾಮಾ ಅವರ ಒಡನಾಡಿ. ಸೆನೆಟ್ ಪ್ರತಿನಿಧಿಯ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅಮೆರಿಕದ ಚಿಕಾಗೋದಲ್ಲಿ ಹಿಂದೂ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ಬೆಂಗಳೂರಿನ ಜ್ಯೋತಿಷಿ ನಾಗೇಂದ್ರರಾವ್ ಅವರ ಸಲಹೆಯಂತೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಹೊತ್ತುಕೊಂಡಿದ್ದರು. ಇದೀಗ ಹರಕೆ ಈಡೇರಿಸಲು ಕ್ಷೇತ್ರಕ್ಕೆ ಬಂದಿರುವುದಾಗಿ ರಾಧಾಕೃಷ್ಣ ಮೂರ್ತಿ ತಿಳಿಸಿದ್ದಾರೆ.
Facebook Comments
You may like
ಶಿವರಾತ್ರಿ ಪೂಜೆ ವಿಚಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತೊಂದು ವಿವಾದ
ಅನಿಲದಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ
ಅಕ್ರಮ ಮರಸಾಗಾಟ ವರದಿ ಮಾಡಲು ಹೊರಟ ಪರ್ತಕರ್ತರ ಮೇಲೆ ಪ್ರಕರಣ ದಾಖಲಿಸಲು ಮುಂದಾದ ಮಂಗಳೂರು ಸಂಚಾರಿ ದಳದ ಪ್ರಭಾರ ವಲಯಾರಣ್ಯಧಿಕಾರಿ
ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ – ರಸ್ತೆ ಸಂಚಾರಕ್ಕೆ ತಡೆ
ಸಾವಿರಾರು ಭಕ್ತರ ನಡುವೆ ನಡೆದ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಬ್ರಹ್ಮರಥೋತ್ಸವ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಬೀದಿ ಉರುಳು ಸೇವೆ ಆರಂಭ….
You must be logged in to post a comment Login