LATEST NEWS
ಕರಾಳ ದಿನ ಆಚರಿಸುವ ಕಾಂಗ್ರೇಸ್ಸಿಗರು ಮೂರ್ಖರು – ಬಿ.ಎಸ್ ಯಡಿಯೂರಪ್ಪ
ಕರಾಳ ದಿನ ಆಚರಿಸುವ ಕಾಂಗ್ರೇಸ್ಸಿಗರು ಮೂರ್ಖರು – ಬಿ.ಎಸ್ ಯಡಿಯೂರಪ್ಪ
ಪುತ್ತೂರು ನವೆಂಬರ್ 9: ಬಿಜೆಪಿ ಪರಿವರ್ತನಾ ಯಾತ್ರೆ ಟೀಕಿಸುವ ಮುಖ್ಯಮಂತ್ರಿಗಳಿಗೆ ಅವರು ನಡೆಸುವ ಪಾದಯಾತ್ರೆಗೆ ಅವರ ಪಕ್ಷದಲ್ಲೇ ಬೆಂಬಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ ಪರಿವರ್ತನಾ ಯಾತ್ರೆಯ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಸೊಗಡು ಶಿವಪ್ಪ ವಿರುದ್ದ ಕ್ರಮಕ್ಕೆ ಹೈಕಮಾಂಡ್ ಗೆ ಮನವಿ ಮಾಡಲಾಗುವುದೆಂದು ಅವರು ಹೇಳಿದರು. ಈ ಹಿಂದೆಯೂ ಕೂಡ ಸೊಗಡು ಶಿವಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಅವರ ವಿರುದ್ದ ಈ ಹಿಂದೆಯೂ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ನೋಟ್ ಬ್ಯಾನ್ ವಿರುದ್ಧ ಕರಾಳ ದಿನ ಆಚರಿಸುವ ಕಾಂಗ್ರೇಸ್ಸಿಗರು ಮೂರ್ಖರು ಎಂದು ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ. ಕಾಂಗ್ರೇಸ್ ಮುಖಂಡರೇ ಕಪ್ಪು ಹಣ ಹೊಂದಿದ್ದು ಇದರಿಂದಾಗಿ ಕಾಂಗ್ರೇಸ್ ಗೆ ಚಟಪಡಿಕೆ ಉಂಟಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಗೆ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ BJP ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You must be logged in to post a comment Login