Connect with us

    MANGALORE

    ಗಾಂಜಾ ಸೇವನೆ ಆರು ಯುವಕರ ಬಂಧನ

    ಗಾಂಜಾ ಸೇವನೆ ಆರು ಯುವಕರ ಬಂಧನ

    ಮಂಗಳೂರು. ಅಕ್ಟೋಬರ್ 21: ಮಾದಕ ದ್ರವ್ಯ  ಗಾಂಜಾ ಸೇವನೆ ಮಾಡುತ್ತಿದ್ದ 6 ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಂಗಳೂರು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ನಲ್ಲಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚನಾಡಿ ಜ್ಯೋತಿನಗರದಲ್ಲಿ ಯುವಕರು ಗಾಂಜಾ ಸೇವನೆಯಲ್ಲಿ ತೊಡಗಿದ್ದರು.

    ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ  ನಾಗಾಭೂಷಣ, ಹರ್ಷ ಪೈಲೂರ್, ಗಗನ್, ಕೃಷ್ಣರಾಜ್, ಭಾಸ್ಕರ್ ಪೂಜಾರಿ, ಶಲಕ್ ರಾಜ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

    ವಶಪಡಿಸಿಕೊಂಡ ಯುವಕರು ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಾಸ್ತವ್ಯವಿದ್ದು, ಗಾಂಜಾ ಸೇವನೆಯ ಚಟವನ್ನು ಹೊಂದಿದ್ದರು.

    ಗಾಂಜಾ ಸೇವನೆಯ ಮಾಡುವ ಉದ್ದೇಶದಿಂದ ತಣ್ಣೀರು ಬಾವಿ ಬೀಚ್ ನಲ್ಲಿ, ಪಚ್ಚನಾಡಿ ಜ್ಯೋತಿ ನಗರದ ಖಾಲಿ ಜಾಗದಲ್ಲಿ ಸೇರಿ ಗಾಂಜಾ ಸೇವನೆ ಮಾಡುತ್ತಿದ್ದರು.

    ಗಾಂಜಾ ಸೇವನೆ ಮಾಡಿದ ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.

    ಗಾಂಜಾ ಸೇವನೆ ಮಾಡಿದ ಯುವಕರ ಹೆತ್ತವರನ್ನು ಸಿಸಿಬಿ ಕಚೇರಿಗೆ ಕರೆಸಿ ಯುವಕರ ಗಾಂಜಾ ಸೇವನೆ ಮಾಡಿದ ಬಗ್ಗೆ ತಿಳಿಸಿ ಅವರಿಗೆ ಯುವಕರ ಮೇಲೆ ನಿಗಾಯಿರಿಸುವಂತೆ ಸೂಚಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply