Connect with us

LATEST NEWS

ಮನೆ ಬಾಡಿಗೆ ವಿಚಾರ – ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಬಾಡಿಗೆ ಮನೆ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸಲು ಹೋದ ಯುವಕ ಮೇಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಮಂಗಳೂರಿನ ಸುರತ್ಕಲ್​ನ ಕಾಟಿಪಳ್ಳದ ಮೊಹಮ್ಮದ್ ಅನಾಸ್ (29) ಎಂದು ಗುರುತಿಸಲಾಗಿದೆ.


ಮೊಹಮ್ಮದ್‌ ಅನಾಸ್ ಅವರು ಬಾಡಿಗೆ ಮನೆ‌ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ದರು. ಚಾರು ಮತ್ತು ರವೂಫ್ ಎಂಬವರು ವಾಸವಿದ್ದ ಬಾಡಿಗೆ ಮನೆಯ ತೆರವು ವಿಚಾರದಲ್ಲಿ ಮಾತುಕತೆಯ ವೈಷಮ್ಯದಿಂದ ಈ ಹಲ್ಲೆ ನಡೆದಿದೆ.

ಮೊಹಮ್ಮದ್ ಅನಾಸ್ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯದ ಅಬೂಬಕ್ಕರ್ ಎಂಬವರ ಮನೆಯ ಬಳಿ ಹೋಗಿದ್ದು, ಗೇಟ್ ಬಳಿ ನಿಂತಿದ್ದ ವೇಳೆ ತಂಡವೊಂದು ದಾಳಿ ನಡೆಸಿದೆ. ಕಾರಿನಲ್ಲಿ ಬಂದ ಚಾರು ಎಂಬಾತ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ.ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾರು ಎಂಬಾತನ ತಂದೆ ರವೂಫ್, ಅಕ್ಕಿ, ಮುಸ್ತಫ ಯಾನೆ ಅಪ್ಪು ಮತ್ತು ಇತರರು ತಪ್ಪಿಸಿಕೊಳ್ಳದಂತೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ ಎಂದು ಮೊಹಮ್ಮದ್ ಅನಾಸ್ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಅನಾಸ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *