Connect with us

    BELTHANGADI

    ಹಾಡುಹಗಲೇ ಯುವತಿಯ ಅತ್ಯಾಚಾರಕ್ಕೆ ಯತ್ನ, ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು…

    ಹಾಡುಹಗಲೇ ಯುವತಿಯ ಅತ್ಯಾಚಾರಕ್ಕೆ ಯತ್ನ, ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು…

    ಬೆಳ್ತಂಗಡಿ, ಅಗಸ್ಟ್ 29: ಆಡು ಮೇಯಿಸುತ್ತಿದ್ದ ಯುವತಿಯನ್ನು ಹಾಡುಹಗಲೇ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ನಿನ್ನಿಕಲ್ಲು ಎಂಬಲ್ಲಿ ನಡೆದಿದೆ.

    ರಸ್ತೆ ಬದಿಯ ಜಾಗದಲ್ಲಿ ಆಡುಗಳನ್ನು ಮೇಯಿಸುತ್ತಿದ್ದ ಯುವತಿಯ ಬಳಿಕ ಸಾದಿಕ್ ಎನ್ನುವ ಯುವಕ ಬಂದಿದ್ದು, ಯುವಕನ ಬರುವಿಕೆಯ ಉದ್ದೇಶವನ್ನು ತಿಳಿದ ಯುವತಿ ಕೂಡಲೇ ಜೋರಾಗಿ ಚೀರಿದ್ದಾಳೆ.

    ಯುವತಿಯ ಚೀರಾಟವನ್ನು ಕೇಳಿದ ಆಕೆಯ ಸಹೋದರ ಸ್ಥಳಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿ ಸಾದಿಕ್ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಹೋದರ ಆತನನ್ನು ಹಿಡಿದಿದ್ದು, ಸ್ಥಳಕ್ಕೆ ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಗೆ ಧರ್ಮದೇಟು ನೀಡಿದ್ದಾರೆ.

    ಬಳಿಕ ಆತನನ್ನು ಬೆಳ್ತಂಗಡಿ ಪೋಲೀಸ್ ಠಾಣೆಗೆ ಕರೆದೊಯ್ದು ಪೋಲೀಸ್ ವಶಕ್ಕೆ ನೀಡಿದ್ದಾರೆ. ಯುವತಿಯ ದೂರಿನ ಮೇರೆಗೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಆರೋಪಿ ಮೇಲೆ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply