Connect with us

    DAKSHINA KANNADA

    ಅರುಣ್ ಕುಮಾರ್ ಪುತ್ತಿಲ ಹೆಸರು ಹೇಳದೆ…ನಮ್ಮ ಕಾರ್ಯಕರ್ತನ ಸ್ಪರ್ಧೆಯಿಂದ ಮೋಸ ಹೋಗುವುದು ಬೇಡ ಎಂದ್ರು ಯೋಗಿ

    ಪುತ್ತೂರು ಮೇ 07: ದಕ್ಷಿಣಕನ್ನಡ ಜಿಲ್ಲೆಯ ಹೈ ವೋಲ್ಟೆಜ್ ಕ್ಷೇತ್ರದಲ್ಲಿ ನಿನ್ನೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ನಮ್ಮ ಪರಿವಾರದ ಕಾರ್ಯಕರ್ತರೊಬ್ಬರು ಇದನ್ನು ವಿರೋಧಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಸ್ಪರ್ಧೆಯಿಂದ ನಾವು ಮೋಸ ಹೋಗುವುದು ಬೇಡ’ ಎಂದಿದ್ದಾರೆ.


    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ದೇವಸ್ಥಾನದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ರೋಡ್‌ ಶೋ ನಡೆಸಿದರು. ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

    ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್‌ ಕುಮಾರ್‌ ಪುತ್ತಿಲ ಹೆಸರನ್ನು ಉಲ್ಲೇಖಿಸದೆಯೇ, ಮಾತನಾಡಿದ ಅವರು ನಮ್ಮ ಪರಿವಾರದ ಕಾರ್ಯಕರ್ತರೊಬ್ಬರು ಇದನ್ನು ವಿರೋಧಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಸ್ಪರ್ಧೆಯಿಂದ ನಾವು ಮೋಸ ಹೋಗುವುದು ಬೇಡ’ ಎಂದಿದ್ದಾರೆ. ‘ಕರ್ನಾಟಕಕ್ಕೆ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಅವಶ್ಯಕತೆ ಇದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡೋಣ. ಆಶಾ ತಿಮ್ಮಪ್ಪಗೌಡ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸೋಣ’ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply