Connect with us

LATEST NEWS

ಹೊಡೆಯುವ ಚಾಳಿ ಇರುವುದು ಕರಾವಳಿ ಜನರಿಗೆ – ಜೆಡಿಎಸ್ ಮುಖಂಡ ಮಧು ಬಂಗಾರಪ್ಪ

ಹೊಡೆಯುವ ಚಾಳಿ ಇರುವುದು ಕರಾವಳಿ ಜನರಿಗೆ – ಜೆಡಿಎಸ್ ಮುಖಂಡ ಮಧು ಬಂಗಾರಪ್ಪ

ಮಂಗಳೂರು ಫೆಬ್ರವರಿ 9: ಹೊಡೆಯುವ ಚಾಳಿ ಇರುವುದು ಕರಾವಳಿ ಜನರಿಗೆ ಬಂಗಾರಪ್ಪನವರಿಗಲ್ಲ ಎಂದು ಜೆಡಿಎಸ್ ಮುಖಂಡ ಮಧುಬಂಗಾರಪ್ವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜನಾರ್ದನ ಪೂಜಾರಿ ಆತ್ಮಕಥೆ ಯಲ್ಲಿ‌‌ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಇಂದಿರಾಗಾಂಧಿ ಗೆ ಬಂಗಾರಪ್ಪ ಹೊಡೆಯಲು ಹೋಗಿದ್ದಾರೆ ಎಂದು ಬರೆದಿದ್ದಾರೆ ಅದೆಲ್ಲಾ ಸುಳ್ಳು ಎಂದು ಹೇಳಿದರು.

ಎಸ್ ಬಂಗಾರಪ್ಪ ಅವರಿಗೆ ಹೊಡೆಯುವ ಚಾಳಿ ಇಲ್ಲ, ಹೊಡೆಯುವ ಚಾಳಿ ಇರುವುದು ಕರಾವಳಿ ಜನರಿಗೆ ಮಾತ್ರ ಎಂದು ಹೇಳಿದರು. ಜನಾರ್ಧನ ಪೂಜಾರಿಯಂತವರಿಂದ ಕರಾವಳಿಯ ಜನರಿಗೆ ಹೊಡೆಯುವ ಚಾಳಿ ಬಂದಿದೆ ಎಂದು ಆರೋಪಿಸಿದರು.

ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಗೆದ್ದಿರೋದಕ್ಕಿಂತ ಸೋತಿರೋದು ಜಾಸ್ತಿ, ಜನಾರ್ದನ ಪೂಜಾರಿ ವಯಸ್ಸಿಗೆ ಗೌರವ ಕೊಡುತ್ತೇನೆ ಹೊರತು ವ್ಯಕ್ತಿ ಗೆ ಕೊಡಲ್ಲ ಎಂದು ಹೇಳಿದರು. ಜನಾರ್ದನ ಪೂಜಾರಿಗೆ ಅರಳು-ಮರಳು ಆರಂಭವಾಗಿದ್ದು, ಕರಾವಳಿಯಲ್ಲಿ ನಡೆಯುವ ಗಲಭೆಗಳಿಗೆ ಜನಾರ್ದನ ಪೂಜಾರಿಯೂ ಕಾರಣ ಎಂದು ಆರೋಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *