KARNATAKA
ಜಾತ್ರೆಯಲ್ಲಿ ಸಿಕ್ಕವಳನ್ನು ಓಯೋ ರೂಂನಲ್ಲಿ ಮುಗಿಸಿದ ಪ್ರಿಯಕರ

ಬೆಂಗಳೂರು ಜೂನ್ 09: ಜಾತ್ರೆಯಲ್ಲಿ ಸಿಕ್ಕು ಪರಿಚಯವಾಗಿದ್ದ ವಿವಾಹಿತ ಮಹಿಳೆ ತನ್ನಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದಕ್ಕೆ ಯುವಕನೊಬ್ಬ ಆಕೆಯನ್ನು ಹೋಟೆಲ್ಗೆ ಕರೆದೊಯ್ದು 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ. ಕೆಂಗೇರಿಯ ಹರಿಣಿ (33) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪದ ಅಡಿ ಟೆಕಿ ಯಶಸ್ (25) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿಯ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿ ಶವ ಪತ್ತೆಯಾಗಿದೆ. 25 ವರ್ಷದ ಆರೋಪಿ ಯಶಸ್, ಟೆಕ್ಕಿಯಾಗಿದ್ದಾನೆ. ಆತ ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಹರಿಣಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಕೆಂಗೇರಿ ನಿವಾಸಿಗಳು ಎಂಬುದು ತಿಳಿದುಬಂದಿದೆ.

ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ದೂರ ಉಳಿದಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿರುವುದಾಗಿ ದಕ್ಷಿಣ ಡಿಸಿಪಿ ಲೋಕೇಶ್ ಲೋಕೇಶ್ ಜಗಲಾಸರ್ ತಿಳಿಸಿದರು.
ಹರಿಣಿ ಅವರು ದಾಸೇಗೌಡ ಎಂಬುವವರನ್ನು 2012ರಲ್ಲಿ ಮದುವೆ ಆಗಿದ್ದರು. ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ದಂಪತಿಗೆ 13 ಹಾಗೂ 10 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಜಾತ್ರೆಯಲ್ಲಿ ಹರಿಣಿ ಅವರು ತಲಘಟ್ಟಪುರದ ನಿವಾಸಿ ಯಶಸ್ಗೆ ಪರಿಚಯವಾಗಿದ್ದರು. ಇಬ್ಬರೂ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ನಿತ್ಯ ಮಾತುಕತೆ ನಡೆಸುತ್ತಿದ್ದರು. ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದಿತ್ತು. ಇಬ್ಬರೂ ಆಗಾಗ್ಗೆ ಭೇಟಿ ಮಾಡುತ್ತಿದ್ದರು. ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ಪತ್ನಿಯ ನಡೆ ಪತಿಗೆ ಅನುಮಾನ ತರಿಸಿತ್ತು’ ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲೇ ಇರುವಂತೆ ಬುದ್ಧಿಮಾತು ಹೇಳಿದ್ದರು. ಅದರ ಮಾಹಿತಿ ತಿಳಿದಿದ್ದ ಆರೋಪಿ ಯಶಸ್, ಹರಿಣಿ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದ. ಕೆಲವು ದಿನಗಳ ನಂತರ ಮನೆಯಿಂದ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಗೆಳೆಯನನ್ನು ಸಂಪರ್ಕಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹರಿಣಿ ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂಬ ಭಾವಿಸಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಚಾಕು ಸಹ ಖರೀದಿಸಿದ್ದ. ಜೂನ್ 7ರಂದು ಆಕೆಯನ್ನು ಸಂಪರ್ಕಿಸಿ ತಮ್ಮ ಜೊತೆಗೆ ಮಾತನಾಡಬೇಕಿದ್ದು, ಪೂರ್ಣಪ್ರಜ್ಞಾ ಲೇಔಟ್ಗೆ ಬರುವಂತೆ ತಿಳಿಸಿದ್ದ. ಆರೋಪಿ ಮಾತು ನಂಬಿದ್ದ ಹರಿಣಿ, ಅಂದು ರಾತ್ರಿ ಹೋಟೆಲ್ ಬಳಿಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.
“ಓಯೋ ರೂಂ ಪಡೆದು ಅಲ್ಲಿಗೆ ಮಹಿಳೆಯನ್ನು ಆರೋಪಿ ಕರೆದೊಯ್ದಿದ್ದ. ಅಲ್ಲಿ ದೇಹದ ವಿವಿಧೆಡೆ ಇರಿದು ಕೊಲೆ ಮಾಡಿದ್ದ. ಅದೇ ಚಾಕುವಿನಿಂದ ಗಾಯ ಮಾಡಿಕೊಂಡು ಆತ್ಮಹತ್ಯೆ ನಾಟಕವಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.