Connect with us

LATEST NEWS

ಶಿವಸೇನಾ ಸಂಸ್ಥಾಪಕ ದಿ. ಬಾಳಾ ಠಾಕ್ರೆ ಮಾಜಿ ಸೊಸೆ ಜತೆಗಿದ್ದ ಮಹಿಳೆ ಮೇಲೆ ಹಲ್ಲೆ

ಶಿವಸೇನಾ ಸಂಸ್ಥಾಪಕ ದಿ. ಬಾಳಾ ಠಾಕ್ರೆ ಸೊಸೆ ಜತೆಗಿದ್ದ ಮಹಿಳೆ ಮೇಲೆ ಹಲ್ಲೆ

ಮಂಗಳೂರು ಮಾರ್ಚ್ 13: ಶಿವಸೇನಾ ಪ್ರಮುಖ ದಿ. ಬಾಳಾ ಠಾಕ್ರೆ ಮಾಜಿ ಸೊಸೆ ಜತೆಗಿದ್ದ ಮಹಿಳೆ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶಿವಸೇನಾ ಪ್ರಮುಖ ದಿ. ಬಾಳಾ ಠಾಕ್ರೆ ಅವರ ಮಾಜಿ ಸೊಸೆ ಸ್ಮಿತಾ ಠಾಕ್ರೆ ಬೆಳ್ತಂಗಡಿಯಿಂದ ಮಂಗಳೂರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಮಂಗಳೂರಿನ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮರಕಡ ಎಂಬಲ್ಲಿ ನಡೆದ ಘಟನೆ ನಡೆದಿದೆ.

ಖಾಸಗಿ ಕಾರು ಚಾಲಕ ದಯಾನಂದ ಎಂಬಾತ ಸ್ಮಿತಾ ಠಾಕ್ರೆ ಜತೆಯಲ್ಲಿದ್ದ ಮಹಿಳೆ ಶರೀನ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ಕಾರು ಚಾಲಕ ದಯಾಂದ ವಾಹನ ಚಾಲನೆ ಮಾಡುವ ಸಮಯದಲ್ಲಿ ಮೊಬೈಲ್ ಬಳಸಿದ್ದ,

ಈ ಸಂಬಂಧ ಶರಿನ್ ಹಾಗೂ ಕಾರು ಚಾಲಕನ ನಡುವೆ ವಾಗ್ವಾದ ನಡೆದಿದೆ.

ಈ ವಾಗ್ವಾದ ಮುಂದುವರೆದು ಕಾರು ಚಾಲಕ ದಯಾನಂದ ಶರೀನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಆರೋಪಿ ಬೆಳ್ತಂಗಡಿ ನಿವಾಸಿ ದಯಾನಂದನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *