DAKSHINA KANNADA
ಸುಳ್ಯ – ಕಾಡಾನೆ ಘೀಳಿಗೆ ಬೆಚ್ಚಿಬಿದ್ದ ಬೈಕ್ ಸವಾರರು…!!
ಪುತ್ತೂರು ನವೆಂಬರ್ 10: ನಡು ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷವಾದ ಘಟನೆ ಸುಳ್ಯ-ಕಾಸರಗೋಡು ಗಡಿಭಾಗದ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಸುಳ್ಯ ಪುತ್ತೂರು ಬೆಳ್ತಂಗಡಿ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದೀಗ ವಾಹನ ಸಂಚಾರ ಮಾಡುವ ರಸ್ತೆಗಳಲ್ಲೂ ಆನೆಗಳು ಕಾಣ ಸಿಗಲು ಪ್ರಾರಂಭಿಸಿದೆ.
ಸುಳ್ಯ-ಕಾಸರಗೋಡು ಗಡಿಭಾಗದ ಪಂಜಿಕಲ್ಲು ಎಂಬಲ್ಲಿ ತಿರುವು ರಸ್ತೆಯಲ್ಲಿ ಕಾಡಾನೆಯೊಂದು ಅಡ್ಡಲಾಗಿ ಬಂದಿದೆ. ಇದೇ ವೇಳೆ ರಸ್ತೆ ಸಂಚರಿಸುತ್ತಿದ್ದ ಬೈಕ್ ಸವಾರ ನೋಡಿ ಆನೆ ಘೀಳಿಟ್ಟಿದ್ದು, ಆನೆಯನ್ನು ಬೈಕ್ ಸವಾರ ತಬ್ಬಿಬಾಗಿದ್ದಾನೆ.
ಬೈಕ್ ಸವಾರರು ನಿಲ್ಲಿಸದೆ ನೇರವಾಗಿ ಮುಂದುವರಿದ ಕಾರಣ ಪವಾಡ ಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತೆ ಇದೆ ಈ ವಿಡಿಯೋ.
You must be logged in to post a comment Login