Connect with us

LATEST NEWS

ಜಿಲ್ಲೆಯ ಭಯೋತ್ಪಾದಕರ ಪ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ – ರಾಮಲಿಂಗಾ ರೆಡ್ಡಿ

ಜಿಲ್ಲೆಯ ಭಯೋತ್ಪಾದಕರ ಪ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ – ರಾಮಲಿಂಗಾ ರೆಡ್ಡಿ

ಮಂಗಳೂರು ಮಾರ್ಚ್ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಭಯೋತ್ಪಾದಕರ ಫ್ಯಾಕ್ಟರಿಗಳಾದ ಸಂಘ ಪರಿವಾರದ ಫ್ಯಾಕ್ಟರಿ ಹಾಗೂ ಎಸ್ ಡಿಪಿಐ, ಪಿಎಫ್ ಐ ಫ್ಯಾಕ್ಟರಿ ಬಂದ್ ಮಾಡುತ್ತೇವೆ ಎಂದು ತಿಳಿಸಿದರು. ಈ ಮೂಲಕ ಗಲಭೆಗಳನ್ನು ನಿಯಂತ್ರಿಸಲು ಕ್ರಮಕೈಗೊಂಡಿದ್ದೇವೆ ಎಂದು ಹೇಳಿದರು.

ಪಿಎಫ್ ಐಐ ಬ್ಯಾನ್ ಮಾಡಿ ಎಂದು ಬಿಜೆಪಿ ಹೇಳುತ್ತಾರೆ, ಆದರೆ ಬಿಜೆಪಿಯವರು ಅಧಿಕಾರಿದಲ್ಲಿದ್ದಾಗ ಬ್ಯಾನ್ ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಮತ ಒಡೆಯಲು ಈ ಸಂಘಟನೆಗಳನ್ನು ಬೆಳೆಸಿದವರೇ ಬಿಜೆಪಿಯವರು ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆದ ಸಾಕಷ್ಟು‌ ಪ್ರಕರಣಗಳಲ್ಲಿ ಹಿಂದೂ- ಹಿಂದೂಗಳೇ ಜಗಳವಾಡಿ ಸಾವನ್ನಪ್ಪಿದ್ದಾರೆ, ಇವರು ಬಿಜೆಪಿ ಕಾರ್ಯಕರ್ತರಾಗಿದ್ದರೂ ಸಾವಿಗೆ ಕಾರಣ ಬೇರೆ- ಬೇರೆ, ಆದರೆ, ಬಿಜೆಪಿ ಮಾತ್ರ ತಮ್ಮ ಪಕ್ಷದ ಕಾರ್ಯಕರ್ತರು ಸತ್ತರು ಎಂದು ಪಟ್ಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ಪರೇಶ್ ಮೇಸ್ತ ಕೊಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು, ಆದರೂ ಬಿಜೆಪಿ, ಮುಖ್ಯಮಂತ್ರಿಗಳು ಆರೋಪಿಗಳನ್ನು ಹಿಡಿಯಲು ಕ್ರಮಕೈಗೊಂಡಿಲ್ಲವೆಂದು ಆರೋಪ‌ ಮಾಡುತ್ತಿದೆ ಎಂದು ಹೇಳಿದರು.

ಶ್ರೀರಾಮ ಸೇನೆ, ಬಜರಂಗದಳ, ವಿಹಿಂಪಾ ಕೂಡಾ ೧೧ ಕೊಲೆ ನಡೆಸಿವೆ ಆದರೆ ಈ ಬಗ್ಗೆ ಬಿಜೆಪಿ ಯಾವುದೇ ಮಾತನ್ನು ಹೇಳುವುದಿಲ್ಲ, ಇವರ ಪರವಾಗಿ ಮಾತನಾಡಲು ಉತ್ತರ ಪ್ರದೇಶದಿಂದ ಆದಿತ್ಯನಾಥರನ್ನು ಕರೆಸುತ್ತಾರೆ ಎಂದು ಹೇಳಿದರು.

ಗೋವುಗಳ ಬಗ್ಗೆ ಬಿಜೆಪಿಯವರಿಗೆ ಆಸಕ್ತಿ ಇದ್ದರೆ. ಕೇಂದ್ರದಲ್ಲಿ ಇವರದೇ ಸರಕಾರವಿದೆ. ಕೂಡಲೇ ರಫ್ತು ನಿಲ್ಲಿಸಿ, ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿ, ಅಲ್ಲದೇ ಉತ್ತರ ಪ್ರದೇಶದಲ್ಲಿ ದೊಡ್ಡ ದೊಡ್ಡ ಗೋಮಾಂಸದ ಫ್ಯಾಕ್ಟರಿಗಳಿವೆ ಅವುಗಳನ್ನು ಬಂದ್ ಮಾಡಲಿ ಎಂದರು. ಗೋಹತ್ಯೆಯ ಜತೆ ಪ್ರತೀ ಪ್ರಾಣಿಯ ಹತ್ಯೆಯೂ ನಿಲ್ಲಬೇಕು, ಎಲ್ಲಾ ಪ್ರಾಣಿಗಳನ್ನು ಹತ್ಯೆ ಮಾಡುವುದು ನಿಲ್ಲಿಸುವುದಕ್ಕೆ ನನ್ನ ಬೆಂಬಲವಿದೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *