Connect with us

    LATEST NEWS

    ಮಂಗಳೂರು ಉಗ್ರ ಗೋಡೆ ಬರಹ – ಮೂರನೇ ಆರೋಪಿ ಬಂಧನ

    ಮಂಗಳೂರು ಡಿಸೆಂಬರ್ 12:ಮಂಗಳೂರಿನಲ್ಲಿ ಉಗ್ರ ಸಂಘಟನೆಗಳ ಪರ ಪ್ರಚೋದಾತ್ಮಕ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಉಗ್ರ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.


    ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಾದತ್ ಎಂದು ಗುರುತಿಸಲಾಗಿದ್ದು, ಈತ ಗೊಡೆ ಬರಹ ಬರೆದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಎನ್ನಲಾಗಿದೆ. ಈ ಹಿನ್ನಲೆ ಇತನನ್ನು 3 ದಿನಗಳ ಹಿಂದೆಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ ಈತನ ಬಂಧನವನ್ನು ಪೊಲೀಸರು ಖಚಿತಪಡಿಸಿದ್ದಾರೆ.


    ಸಾದತ್ ಈಗಾಗಲೇ ಉಗ್ರ ಬರಹ ಪ್ರಕರಣದಲ್ಲಿ ಬಂಧಿತನಾಗಿರುವ ಮಹಮ್ಮದ್ ಶಾರೀಕ್ ನ ಚಿಕ್ಕಪ್ಪ ಎಂದು ತಿಳಿದು ಬಂದಿದೆ. ಗೋಡೆ ಬರಹ ಬರೆದ ಬಳಿಕ ಪೊಲೀಸರ ತನಿಖೆ ಆರಂಭವಾಗುತ್ತಿದ್ದಂತೆ ಶಾರೀಕ್ ತಿರ್ಥಹಳ್ಳಿಗೆ ವಾಪಾಸ್ ಆಗಿದ್ದ, ಈ ಸಂದರ್ಭ ಸಾದತ್ ಶಾರೀಕ್ ಗೆ ತಪ್ಪಿಸಿಕೊಳ್ಳಲು ಹಣದ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ. ಶಾರೀಕ್ ಬಂಧನದ ಬಳಿಕ ಸಾದತ್ ತಲೆ ಮರೆಸಿಕೊಂಡಿದ್ದ, ಆದರೆ ಪೊಲೀಸರು ಕೆಲ ದಿನಗಳ ಹಿಂದೆ ಆತನನ್ನು ವಶಕ್ಕೆ ಪಡೆದಿದ್ದರು.

    ಶಾರೀಕ್ ಮತ್ತು ಮಝಾ ಮುನೀರ್ ನನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದು, ಐಸಿಸ್ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಶೇಕ್ ಅಬ್ದುಲ್ಲಾ ಫೈಸಲ್ ಎಂಬಾತನ ಪ್ರಚೋದನಾಕಿ ಭಾಷಣದ ವಿಡಿಯೋಗಳು ಆರೋಪಿಗಳ ಬಳಿ ಪತ್ತೆಯಾಗಿದೆ. ಅಲ್ಲದೆ ಮುಖ್ಯ ಆರೋಪಿ ಮಹಮ್ಮದ್ ಶಾರೀಕ್ ಗೆ ವಿದೇಶದಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಪ್ರಚೋದನಕಾರಿ ಬರಹ ಬರೆಯುವಂತೆ ಸೂಚನೆ ನೀಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply