Connect with us

    BELTHANGADI

    ಬೆಳ್ತಂಗಡಿ ಚುನಾವಣಾ ಅಖಾಡಕ್ಕೆ ವಿಜಯ ರಾಘವೇಂದ್ರ ಎಂಟ್ರಿ: ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ ನಟ..!

    ಬೆಳ್ತಂಗಡಿ, ಎಪ್ರಿಲ್ 16: ಬೆಳ್ತಂಗಡಿ ಚುನಾವಣಾ ಅಖಾಡಕ್ಕೆ ಚಿನ್ನರಿಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದಾರೆ.

    ದ. ಕ ಜಿಲ್ಲೆಯ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ವಿಜಯ ರಾಘವೇಂದ್ರ ಬೆಂಬಲ ನೀಡಿದ್ದು, ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿರುವ ರಕ್ಷಿತ್ ಶಿವರಾಂ ಪರ ನಟ ವಿಜಯ ರಾಘವೇಂದ್ರ ಭಾಗಿಯಾಗಲಿದ್ದಾರೆ.

    ರಕ್ಷಿತ್ ಶಿವರಾಂಗೆ ವಿಜಯಾಸ್ತ್ರವಾಗುತ್ತಾ ವಿಜಯ ರಾಘವೇಂದ್ರ ಎಂಟ್ರಿ:

    ವಿಜಯ ರಾಘವೇಂದ್ರ ಪತ್ನಿಯ ಸಹೋದರರಾಗಿರುವ ರಕ್ಷಿತ್ ಶಿವರಾಂ ಕುಟುಂಬ ಸಮೇತರಾಗಿ ರಕ್ಷಿತ್ ಶಿವರಾಂ ಪರ ಬೆಂಬಲ ಸೂಚಿಸಲು ಬೆಳ್ತಂಗಡಿಗೆ ಆಗಮಿಸಿದ್ದಾರೆ. ರಾಜಕೀಯ ಎಂಟ್ರಿ ಬಗ್ಗೆ ಪ್ರತಿಕ್ರಿಯಿಸಿರುವ  ವಿಜಯ ರಾಘವೇಂದ್ರ ,ರಕ್ಷಿತ್ ಶಿವರಾಂ ನನ್ನ ಬಾಮೈದ ಅವರ ಪರ ನಿಲ್ಲುವುದು ನನ್ನ ಕರ್ತವ್ಯ, ನಾನು ರಕ್ಷಿತ್ ಶಿವರಾಂಗೋಸ್ಕರ ಬಂದಿದ್ದೇನೆ. ರಕ್ಷಿತ್ ಶಿವರಾಂ ನಮ್ಮ ಮನೆಯವರು, ನಾನು ರಕ್ಷಿತ್ ಅವರ ಪ್ರತಿ ಕೆಲಸದಲ್ಲಿ ಅವರ ಜೊತೆ ನಿಂತಿದ್ದೇನೆ, ಅವರು ನನ್ನ ಜೊತೆ ಬಲವಾಗಿ ನಿಂತಿದ್ದರು, ಅ ಪಕ್ಷ ಈ ಪಕ್ಷ ಅಂತ ಅಲ್ಲ ನಮಗೆ ರಕ್ಷಿತ್ ಮುಖ್ಯ ಎಂದು ಬೆಳ್ತಂಗಡಿಯಲ್ಲಿ ನಟ ವಿಜಯ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply