Connect with us

LATEST NEWS

ಗಾಂಧಿ ಹತ್ಯೆಗೆ ಸ್ಕಚ್ ಹಾಕಿದ್ದೇ ವೀರ ಸಾವರ್ಕರ್- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾವರ್ಕರ್ ಬಗ್ಗೆ ಹೇಳಿದ್ದೇನು ?

ಗಾಂಧಿ ಹತ್ಯೆಗೆ ಸ್ಕಚ್ ಹಾಕಿದ್ದೇ ವೀರ ಸಾವರ್ಕರ್- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾವರ್ಕರ್ ಬಗ್ಗೆ ಹೇಳಿದ್ದೇನು ?

ಮಂಗಳೂರು ಅಕ್ಟೋಬರ್ 18: ಮಹಾತ್ಮಾಗಾಂಧಿ ಹತ್ಯೆಯ ಪ್ರಮುಖ ರೂವಾರಿ ವೀರ ಸಾರ್ವರ್ಕರ್ ಗೆ ಬಿಜೆಪಿ ಸರಕಾರ ಭಾರತ ರತ್ನ ನೀಡಲು ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದವರಲ್ಲಿ ವೀರ ಸಾವರ್ಕರ್ ಕೂಡಾ ಒಬ್ಬರು. ನಾಥುರಾಮ್ ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿರುವುದು ವೀರ ಸಾವರ್ಕರ್. ಆದರೆ ಸೂಕ್ತ ಸಾಕ್ಷಾಧಾರ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ. ಇಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.ಬಿಜೆಪಿ ಗೋಡ್ಸೆಗೂ ಭಾರತ ರತ್ನ ಕೊಡಲಿ ಎಂದು ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಮಂಗಳೂರಿನ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಅವರು ಕೇರಳದ ಮಂಜೇಶ್ವರ ಕ್ಷೇತ್ರದ ಉಪಚುನಾವಣೆ ಸಂಬಂಧ ಪಕ್ಷದ ಪರ ಪ್ರಚಾರ ನಡೆಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *