Connect with us

LATEST NEWS

ಈ ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳುವುದು ಶತಃಸಿದ್ಧ – ವೇದವ್ಯಾಸ್ ಕಾಮತ್

ಮಂಗಳೂರು ಎಪ್ರಿಲ್ 27: ಹಾಲಿ ಶಾಸಕ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ್ ಕಾಮತ್ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು, ಇಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅತ್ತಾವರ, ಜಪ್ಪಿನಮೊಗರು, ನಾಗುರಿ, ಎಕ್ಕೂರು ಪರಿಸರಕ್ಕೆ ತೆರಳಿ ಮತ ಯಾಚಿಸಿದರು.


ಈ ವೇಳೆ ಮಾತನಾಡಿದ ಅವರು ಬಿಜೆಪಿಯ ಗೆಲುವಿನ ಓಟಕ್ಕೆ ಮತದಾರ ಪ್ರಭುಗಳು ನೀಡುತ್ತಿರುವ ಆಶೀರ್ವಾದವೇ ದೊಡ್ಡ ಶಕ್ತಿ. ಜನರ ಮನಸ್ಸು ಈಗಾಗಲೇ ಬಿಜೆಪಿ ಪರ ಇರುವುದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮನೆ ಮನೆಯ ಭೇಟಿ ಸಂದರ್ಭದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಪ್ರತೀ ಮನೆಯವರೊಂದಿಗೆ ಇಟ್ಟುಕೊಂಡಿರುವ ಆತ್ಮೀಯ ಸಂಪರ್ಕವು, ಬಿಜೆಪಿ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುವಲ್ಲಿ ಸಹಕಾರಿಯಾಗಿವೆ. ಈ ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳುವುದು ಶತಃಸಿದ್ಧ” ಎಂದು ವಿಶ್ವಾಸದಿಂದ ನುಡಿದರು.


ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜೊತೆಗೆ ಪರಿಸರದ ಹಿರಿಯರು, ಯುವಕರು, ಮಹಿಳೆಯರು ಹಾಜರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *