Connect with us

DAKSHINA KANNADA

ಅರಣ್ಯ ಇಲಾಖೆಯಿಂದಾಗಿ ವಂದೇ ಭಾರತ್ ರೈಲು ವಿಳಂಬ: ನಳಿನ್ ಕುಮಾರ್ ಕಟೀಲ್

ಪುತ್ತೂರು, ಜುಲೈ 18: ಮಂಗಳೂರಿಗೆ ವಂದೇ ಭಾರತ್ ರೈಲು ಆಗಮನ ವಿಳಂಬವಾಗಲು ರೈಲ್ವೇ ಹಳಿಯ ವಿದ್ಯುತ್ತೀಕರಣ ಕಾಮಗಾರಿ ಕಾರಣವಾಗಿದೆ ಎಂದು ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂಗಳೂರು-ಬೆಂಗಳೂರು-ಮೈಸೂರು ರೈಲ್ವೇ ಮಾರ್ಗದಲ್ಲಿ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯ ಸಮಸ್ಯೆಯಿಂದಾಗಿ ಹಳಿಯ ವಿದ್ಯುತ್ತೀಕರಣ ಕಾಮಗಾರಿ ವಿಳಂಬವಾಗಿದೆ.

ಆದರೆ ಇದೀಗ ಮತ್ತೆ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿ ಎಂದ ಅವರು ಜಿಲ್ಲೆಯ ಹಲವು ಕಡೆಗಳಲ್ಲಿ ರೈಲ್ವೇ ಹಳಿಗೆ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *