Connect with us

LATEST NEWS

ಮೈತ್ರಿ ಸರಕಾರದ ಸಚಿವರಾಗಿ ಆಗಮಿಸಿದ ಯು.ಟಿ ಖಾದರ್ ಗೆ ಭರ್ಜರಿ ಸ್ವಾಗತ

ಮೈತ್ರಿ ಸರಕಾರದ ಸಚಿವರಾಗಿ ಆಗಮಿಸಿದ ಯು.ಟಿ ಖಾದರ್ ಗೆ ಭರ್ಜರಿ ಸ್ವಾಗತ

ಮಂಗಳೂರು ಜೂನ್ 9: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ‌ ಸರಕಾರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಅಧಿಕಾರ‌ ಸ್ವೀಕರಿಸಿ ಮಂಗಳೂರಿಗೆ‌ ಆಗಮಿಸಿದ‌ ಸಚಿವ ಯು.ಟಿ.‌ಖಾದರ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ‌ ಸ್ವಾಗತ‌‌ ದೊರೆಯಿತು.

ಮಂಗಳೂರು ವಿಮಾನ‌‌ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ನಿಂದ ಇಳಿದ ಸಚಿವ ಖಾದರ್ ಅವರನ್ನು ವಿಮಾನ‌ ನಿಲ್ದಾಣದ ಸಿಬ್ಬಂದಿ‌ ಸ್ವಾಗತಿಸಿದರು. ಬಳಿಕ ಕಾಂಗ್ರೆಸ್ ನ‌ ಮುಖಂಡರು ಹೂಗುಚ್ಛ ನೀಡಿ ಬರಮಾಡಿಕೊಂಡರು.

ಬಳಿಕ ಮಂಗಳೂರು ನಗರದ ಕಾವೂರು ಹಾಗೂ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ‌ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ಘೋಷಣೆಯೊಂದಿಗೆ ಭರ್ಜರಿಯಾಗೇ ಸ್ವಾಗತಿದಲ್ಲದೇ, ಸಿಹಿ‌ ತಿಂಡಿ‌‌ ಹಂಚಿ‌ ಸಂಭ್ರಮಿಸಿದರು.‌ ಈ ನಡುವೆ ಕೆಲವು ಕಾರ್ಯಕರ್ತರು ಖಾದರ್ ಜತೆ ಸೆಲ್ಫಿ ಕ್ಲಿಕ್ಕಿಸಿ‌ ಸಂತೋಷಪಟ್ಟರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *