LATEST NEWS
ಉಡುಪಿ – ಕಂಟೈನರ್ ಲಾರಿ ಡಿಕ್ಕಿ ಪೆರಂಪಳ್ಳಿ ಸ್ವಾಮಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಸಾವು
ಉಡುಪಿ ನವೆಂಬರ್ 02: ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನಪ್ಪಿದ ಘಟನೆ ಕರಾವಳಿ – ಸಂತೆಕಟ್ಟೆ ರಾ.ಹೆ. 66ರಲ್ಲಿ ನಡೆದಿದೆ. ಮೃತರನ್ನು ಪಾದಚಾರಿ ಪೆರಂಪಳ್ಳಿ ಸ್ವಾಮಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಉಡುಪಿ ಪುತ್ತೂರು ನಿವಾಸಿ ಸಂಜೀವ ಪೂಜಾರಿ (62) ಎಂದು ಗುರುತಿಸಲಾಗಿದೆ.
ಅವರು ಕರಾವಳಿ – ಸಂತೆಕಟ್ಟೆ ರಾ.ಹೆ. 66ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಂಟೈನರ್ ವಾಹನವನ್ನು ಅದರ ಚಾಲಕ ಪ್ರಮೋದ್ ಅವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಂಜೀವ ಅವರಿಗೆ ಢಿಕ್ಕಿ ಹೊಡೆದಿದೆ. ನವೆಂಬರ್ 1ರ ಬುಧವಾರ ಬೆಳಗ್ಗೆ 6:50ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ನೋಂದಣಿಯ ಕಂಟೈನರ್ ವಾಹನವು ರಸ್ತೆಯ ಎಡಭಾಗದಲ್ಲಿ ಬಂದ ಚಾಲಕ ಪ್ರಮೋದ್ ರವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಪಲ್ಟಿಯಾಗಿದೆ. ಇದರಿಂದ ಲಾರಿಯ ಕಂಟೈನರ್ ಬಾಕ್ಸ್ ವಾಹನದಿಂದ ಬೇರ್ಪಟ್ಟು ಲಾರಿ ನಿಯಂತ್ರಣ ತಪ್ಪಿ ಸಂಜೀವನಿಗೆ ಡಿಕ್ಕಿ ಹೊಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login