DAKSHINA KANNADA
ಉಡುಪಿ ಪೇಜಾವರ ಶ್ರೀಗಳಿಗೆ ನಾಳೆ ಶಸ್ತ್ರಚಿಕಿತ್ಸೆ ; ಆತಂಕ ಪಡುವ ಅಗತ್ಯವಿಲ್ಲ ಮಠ ಸ್ಪಷ್ಟನೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಉಡುಪಿ , ಆಗಸ್ಟ್ 19 : ಪರ್ಯಾಯ ಪೀಠಾಧಿಪತಿ ಉಡುಪಿ ಪೇಜಾವರ ಶ್ರೀ ಗಳು ನಾಳೆ ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ . ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಾಳೆ ವಿಶ್ವೇಶ ತೀರ್ಥ ಸ್ವಾಮಿಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ.
86 ವಯಸ್ಸಿನ ಪೇಜಾವರ ಶ್ರೀ ಗಳು ಹರ್ನಿಯಾ ನೋವು ಹೊರತುಪಡಿಸಿದರೆ ಲವಲವಿಕೆಯಿಂದಲೇ ಇದ್ದು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ಒಳಗಾಗಲಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಸದ್ಯ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಪೇಜಾವರ ಶ್ರೀ ಗಳು ಎಂದಿನಂತೆ ಇಂದು ಕೂಡ ಎಲ್ಲಾ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸಿದ್ದರು .
ನಾಳೆ ಆದಿತ್ಯವಾರ ಅಪರಾಹ್ನ ಮಹಾಪೂಜೆಯ ಬಳಿಕ ಪೇಜಾವರ ಶ್ರೀ ಗಳು ಮಣಿಪಾಲ ಆಸ್ಪತ್ರೆಗೆ ತೆರಳಲಿದ್ದಾರೆ ಮತ್ತು ಶಸ್ತ್ರಕ್ರೀಯೆಗೆ ಒಳಗಾಗಲಿದ್ದಾರೆ. ಒಂದು ದಿನದ ಚಿಕಿತ್ಸೆಯ ಬಳಿಕ ಸೋಮವಾರ ಶ್ರೀ ಗಳು ಆಸ್ಪತ್ರೆಯಿಂದ ಬಿಡುಗಡೆಹೊಂದಿ ಮಠಕ್ಕೆ ಮರಳಲಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಠದ ಆಡಳಿತ ಮಂಡಳಿ ಇದೊಂದು ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆಆಗಿದ್ದು ಸಾರ್ವಜನಿಕರು ಹಾಗೂ ಭಕ್ತರು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದೆ.
You must be logged in to post a comment Login