Connect with us

LATEST NEWS

ಉಡುಪಿ – ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಐನಾಝ್ ಕುಟುಂಬ

ಉಡುಪಿ ನವೆಂಬರ್ 18: ಉಡುಪಿ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಗೈದ ಆರೋಪಿಯನ್ನು ಘಟನೆ ನಡೆದ 2 ದಿನದೊಳಗೆ ಬಂಧಿಸಿದ ಉಡುಪಿ ಪೊಲೀಸರ ಕೆಲಸಕ್ಕೆ ಕೊಲೆಯಾದ ಗಗನಸಖಿ ಐನಾಝ್ ಕುಟುಂಬ ಧನ್ಯವಾದ ತಿಳಿಸಿದೆ.


ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಮೊಹಮ್ಮದ್ ಕುಟುಂಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟ ಮೊಹಮ್ಮದ್ ಕುಟುಂಬ ಆರೋಪಿಯನ್ನು ಶೀಘ್ರವಾಗಿ ಪತ್ತೆ ಹಚ್ಚಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಮೊಹಮ್ಮದ್ ಅವರು, ದೀಪಾವಳಿ ಆಚರಿಸಿದೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆ ನಡೆದು ಎರಡು ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಉಡುಪಿ ಎಸ್‌ಪಿ ವಿಶ್ವಾಸದ ಮತ್ತು ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಬದುಕುಳಿದ ಪುತ್ರ ಅಸಾದ್ ಹೇಗೆ ಜೀವನ ಕಟ್ಟಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ. ಊಹಾಪೋಹಗಳು ಸುಳ್ಳು ಎಂದು ಎಸ್ ಪಿ ಮಾಹಿತಿ ನೀಡಿರುವುದು ನೆಮ್ಮದಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply