LATEST NEWS
ಉಡುಪಿ – ಕೋಟ ಮೂಡುಗಿಳಿಯಾರು ಬಳಿ ಚಿರತೆ ಪ್ರತ್ಯಕ್ಷ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕೋಟ ಅಗಸ್ಟ್ 26: ಬೆಳಗಾವಿ ಚಿರತೆ ಕಾಟ ಇನ್ನೂ ಮುಂದುವರೆದಿರುವ ಬೆನ್ನಲ್ಲೆ ಇದೀಗ ಉಡುಪಿ ಜಿಲ್ಲೆಯಲ್ಲೂ ಚಿರತೆ ಕಾಟ ಆರಂಭವಾಗಿದ್ದು, ಜಿಲ್ಲೆ. ಕೋಟ ಮೂಡುಗಿಳಿಯಾರು ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಠಿಸಿದೆ.
ಮೂಡುಗಿಳಿಯಾರು ಸಣ್ಣ ಬಸವನಕಲ್ಲು ಪ್ರದೇಶದ ರಸ್ತೆ ಬದಿಯ ಪೊದೆಯ ಬಳಿ ಚಿರತೆ ಪತ್ತೆಯಾಗಿದೆ. ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳುವ ವೇಳೆ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕಳೆದ ವರ್ಷ ಇದೇ ಪರಿಸರದಲ್ಲಿ ಚಿರತೆಯೊಂದು ಹಸುವಿನ ಮೇಲೆ ಧಾಳಿ ಮಾಡಿತ್ತು, ಬಳಿಕ ಇದೀಗ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಚಿರತೆ ಪತ್ತೆಯಾದ ಕುರಿತು ಅರಣ್ಯ ಇಲಾಖೆ ಸ್ಥಳೀಯರ ದೂರು ನೀಡಿದ್ದಾರೆ. ಈ ಪ್ರದೇಶದಲ್ಲಿ ಜನಸಂಚಾರ ಹೆಚ್ಚಾಗಿರುವ ಕಾರಣ ಅರಣ್ಯ ಇಲಾಖೆ ಕೂಡಲೇ ಚಿರತೆ ಹಿಡಿಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login