Connect with us

LATEST NEWS

ಉಡುಪಿ ಕೃಷ್ಣ ಮಠಕ್ಕೆ ವರಾಹ ರೂಪಂ ಗಾಯಕ ಸಾಯಿ ವಿಘ್ನೇಶ್ ಭೇಟಿ

ಉಡುಪಿ ಜನವರಿ 30: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಗಾಯಕ ಸಾಯಿ ವಿಘ್ನೇಶ್ ಭೇಟಿ ನೀಡಿ ಶ್ರೀಕೃಷ್ಣ ನ ದರ್ಶನ ಪಡೆದರು.


ಕಾಂತರಾ ಸಿನಿಮಾದಲ್ಲಿ ವರಾಹ ರೂಪಂ ಹಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಗಾಯಕ, ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ ವೇಳೆ ಮಠಕ್ಕೆ ಭೇಟಿ ಕೊಟ್ಟರು. ಶ್ರೀ ಕೃಷ್ಣ ದರ್ಶನ ಕೈಗೊಂಡ ಬಳಿಕ, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ, ಸುಶ್ರೀಂದ್ರ ಸಮ್ಮುಖದಲ್ಲಿ ವರಾಹ ರೂಪಂ ಹಾಡು ಹಾಡಿದರು.

ವಿಘ್ನೇಶ್ ಅವರ ಹಾಡು ಕೇಳಿ ಶ್ರೀಪಾದರು ಸಂತೋಷ ವ್ಯಕ್ತಪಡಿಸಿದರು. ಇದೆ ವೇಳೆ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಗಾಯಕ ವಿಘ್ನೇಶ್ ಗೌರವ ಸ್ವೀಕರಿಸಿದರು. ಶ್ರೀ ಕೃಷ್ಣ ಮಠದ ಕಲಾವಿದರಾದ ನಾರಾಯಣ ಶರಳಾಯ ಜೊತೆಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *