Connect with us

    LATEST NEWS

    ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ವರ್ಗಾವಣೆ- ಕೂರ್ಮ ರಾವ್ ಹೊಸ ಜಿಲ್ಲಾಧಿಕಾರಿ

    ಉಡುಪಿ, ಅಗಸ್ಟ್ 29: ಹಲವು ದಿನಗಳಿಂದ ಸುದ್ದಿಯಲ್ಲಿದ್ದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ವರ್ಗಾವಣೆ ಆದೇಶ ಇಂದು ಹೊರಬಿದ್ದಿದ್ದು, ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ವರ್ಗಾಯಿಸಲಾಗಿದೆ.

    ಕಳೆದ ಎರಡು ವರ್ಷಗಳಿಂದ ಉಡುಪಿಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಿ.ಜಗದೀಶ್ ಅವರ ಸ್ಥಾನಕ್ಕೆ ಈಗ ಕಲುಬುರ್ಗಿಯಲ್ಲಿ ಎನ್‌ಇಕೆಆರ್‌ಟಿಸಿಯ ಆಡಳಿತ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಕುರ್ಮ ರಾವ್ ಎಂ. ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾಯಿಸ ಲಾಗಿದೆ.

    ಆಂಧ್ರ ಪ್ರದೇಶದವರಾದ ಕುರ್ಮ ರಾವ್ ಅವರು ಬಿ.ಟೆಕ್ ಇಂಜಿನಿಯರಿಂಗ್ ಪದವೀಧರರಾಗಿದ್ದು, 2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. 2010ರಲ್ಲಿ ಅವರು 23ನೇ ರ್ಯಾಂಕ್‌ನೊಂದಿಗೆ ತೇರ್ಗಡೆಗೊಂಡಿದ್ದರು. ಹಿಂದೆ ಎರಡು ಬಾರಿ ಅವರು ಯುಪಿಎಸ್‌ಸಿಯಲ್ಲಿ ತೇರ್ಗಡೆಗೊಂಡಿದ್ದರೂ ಐಆರ್‌ಎಸ್ ಹಾಗೂ ಐಪಿಎಸ್ ಹುದ್ದೆ ಪಡೆದಿದ್ದರು. ಕೊನೆಗೂ ಮೂರನೇ ಬಾರಿ ಅವರು 23ನೇ ರ್ಯಾಂಕ್‌ನೊಂದಿಗೆ ಐಎಎಸ್ ಆಗಿ ಆಯ್ಕೆಯಾಗಿದ್ದರು.

    ಕುರ್ಮ ರಾವ್ ಅವರು 2016ರ ಜ.4ರಿಂದ 2017ರ ಆ.5ರವರೆಗೆ ರಾಯಚೂರು ಜಿಪಂನ ಸಿಇಓ ಹಾಗೂ 2017ರ ಆ.4ರಿಂದ 2020ರ ಆ.27ರವರೆಗೆ ಯಾದಗಿರಿಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಆ ಬಳಿಕ ಎನ್‌ಇಕೆಆರ್‌ಟಿಸಿಯ ಆಡಳಿತ ನಿರ್ದೇಶಕರಾಗಿ ನೇಮಕಗೊಂಡಿದ್ದರು. 41 ವರ್ಷ ಪ್ರಾಯದ ಕುರ್ಮ ರಾವ್ ಅವರು ಇದೀಗ ಮತ್ತೆ ಉಡುಪಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply